Advertisement

ಕೋವಿಡ್ ನಿಯಂತ್ರಣದಲ್ಲಿ ಆಯುಷ್‌ ವೈದ್ಯರ ಪಾತ್ರ ಅಪಾರ: ಕುಮಾರ್‌

05:34 PM Jun 06, 2020 | Naveen |

ಸೊರಬ: ಕೋವಿಡ್ ಹರಡುವಿಕೆ ತಡೆಗಟ್ಟುವಲ್ಲಿ ಆಯುಷ್‌ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರ ಶ್ರಮ ಸಾಕಷ್ಟಿದೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದರು. ಪಟ್ಟಣದ ರಂಗಮಂದಿರದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಆಯುಷ್‌ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಆಯುಷ್‌ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಚ್ಯವನಪ್ರಾಶ, ಆಯುಷ್‌ ಕಷಾಯ ಚೂರ್ಣ ಹಾಗೂ ಅಣುತೈಲ ವಿತರಿಸಿ ಅವರು ಮಾತನಾಡಿದರು.

Advertisement

ಕೋವಿಡ್ ಯೋಧರ ಪಡೆಯಲ್ಲಿ ಆಶಾ ಕಾರ್ಯಕರ್ತೆಯರು ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಜೊತೆಯಲ್ಲಿ ಆಯುಷ್‌ ವೈದ್ಯರು ಸಹ ಸಾಕಷ್ಟ ಶ್ರಮ ವಹಿಸಿ ಇಂತಹ ತುರ್ತುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಿರುವುದು ಶ್ಲಾಘನೀಯವಾಗಿದೆ. ಚ್ಯವನಪ್ರಾಶ, ಆಯುಷ್‌ ಕಷಾಯ ಚೂರ್ಣ ಹಾಗೂ ಅಣುತೈಲಗಳನ್ನು ಉಪಯೋಗಿಸುವ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡು ಕೋವಿಡ್ ನಿಯಂತ್ರಿಸುವಲ್ಲಿ ಅನೇಕ ರಾಜ್ಯಗಳು ಯಶಸ್ವಿಯಾಗಿವೆ ಎಂದರು.

ಆಯುಷ್‌ ವೈದ್ಯಾಧಿಕಾರಿ ಡಾ| ಎಸ್‌.ಟಿ. ಮುರುಳೀಧರ್‌ ಮಾತನಾಡಿ, ಕೇಂದ್ರ ಸರ್ಕಾರದ ಆಯುಷ್‌ ಮಂತ್ರಾಲಯ ಮತ್ತು ರಾಜ್ಯ ಆಯುಷ್‌ ಇಲಾಖೆಯ ಕೊರೊನಾ ತಡೆ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು. ಜಿಪಂ ಸದಸ್ಯ ಶಿವಲಿಂಗೇಗೌಡ, ತಹಶೀಲ್ದಾರ್‌ ನಫೀಸಾ ಬೇಗಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಶ್‌ ಸುರಗಿಹಳ್ಳಿ, ತಾಲೂಕು ಆರೋಗ್ಯಾಧಿಕಾರಿ ಡಾ| ಅಕ್ಷತಾ ವಿ. ಖಾನಾಪುರ, ತಾಪಂ ಇಒ ನಂದಿನಿ, ಆಯುಷ್‌ ವೈದ್ಯಾ ಧಿಕಾರಿಗಳಾದ ಡಾ|ಎಂ.ಕೆ. ಮಹೇಶ್‌, ಡಾ| ಮಹಾಲಿಂಗಪ್ಪ, ಡಾ| ನಧಾಫ್‌, ಡಾ| ರಮೀಜಾ ಬೇಗಂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next