Advertisement

ಸಿದ್ದರಾಮಯ್ಯನವರು ಧರ್ಮವನ್ನು ಕೆಣಕಿದ್ದಕ್ಕೆ ಯಡಿಯೂರಪ್ಪನವರಿಗೆ ಅಧಿಕಾರ ಸಿಕ್ಕಿದೆ: ಸೋಮಣ್ಣ

09:44 AM Feb 17, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯನವರ ಕೊಡುಗೆ ಮಹತ್ವದ್ದು. ಎಲ್ಲವನ್ನೂ ಮಾಡಿದ್ರು ಆದರೆ ಧರ್ಮವನ್ನು ಸ್ವಲ್ಪ ಕೆಣಿಕಿದರು. ಅವರು ಕೆಣಕಿದಕ್ಕೆ ಯಡಿಯೂರಪ್ಪನವರಿಗೆ ಅಧಿಕಾರ ಸಿಕ್ಕಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಇಲ್ಲಿನ ಅಸಂಖ್ಯ ಪ್ರಮಥರ ಗಣಮೇಳದ ವೇದಿಕೆಯಲ್ಲಿ ಸಿದ್ದರಾಮಯ್ಯ ಎದುರೇ ಸೋಮಣ್ಣ ಈ ಮಾತುಗಳನ್ನು ಹೇಳಿದರು.

ಸಿದ್ದರಾಮಯ್ಯನವರ ಜೊತೆ ಇದ್ದು ಕೆಲಸ ಮಾಡಿದವನು ನಾನು. ಅವರು ಮಾಡಿ ಅಭಿವೃದ್ಧಿ ಪರ ಯೋಜನೆಗಳನ್ನು ಯಡಿಯೂರಪ್ಪ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಧರ್ಮವನ್ನು ಕೆಣಕಿದ್ದಕ್ಕೆ ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ ಎಂದು ಸೋಮಣ್ಣ ಪ್ರತ್ಯೇಕ ಧರ್ಮದ ವಿಚಾರವಾಗಿ ವೇದಿಕೆಯಲ್ಲಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next