Advertisement

ವಿಜಯೇಂದ್ರ ಕಿವಿ ಹಿಂಡಿದ ಸಚಿವ ವಿ. ಸೋಮಣ್ಣ

12:30 AM Jun 23, 2024 | Team Udayavani |

ಬೆಂಗಳೂರು: ಯಾರು ಕೆಲಸಕ್ಕೆ ಬರುತ್ತಾರೆ, ಪಕ್ಷಕ್ಕಾಗಿ ದುಡಿಯುತ್ತಾರೆ ಎಂಬುದನ್ನು ನೋಡಿಕೊಳ್ಳಿ. ಅಂಥವರನ್ನು ಬಿಟ್ಟು ಉಳಿದವರ ವಿರುದ್ಧ ಇನ್ನು ಮುಂದಾದರೂ ಕಠಿನ ಕ್ರಮ ತೆಗೆದುಕೊಳ್ಳಿ. ಇಲ್ಲದಿದ್ದರೆ ಯಾರೋ ಮಾಡಿದ ಪಾಪಕ್ಕೆ ಯಾರೋ ಬಲಿಪಶು ಆಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕೇಂದ್ರ ಸಚಿವ ವಿ. ಸೋಮಣ್ಣ ಎಚ್ಚರಿಸಿದರು.

Advertisement

ಶನಿವಾರ ಬೆಂಗಳೂರಿನಲ್ಲಿ ಎನ್‌ಡಿಎ ಸಂಸದರು ಮತ್ತು ಕೇಂದ್ರ ಸಚಿವರ ಅಭಿನಂದನ ಸಮಾರಂಭದ ವೇದಿಕೆ ಯಲ್ಲೇ “ವಿಜಯೇಂದ್ರ ಅವರಿಗೆ ಮನವಿ ಮಾಡುತ್ತೇನೆ’ ಎನ್ನುವ ಮೂಲಕ ಸೋಮಣ್ಣ ನಯವಾಗಿ ಎಚ್ಚರಿಕೆ ನೀಡಿದರು.

ಎರಡು ಕಡೆ ಸೋತ ನನ್ನನ್ನು ರಾಷ್ಟ್ರೀಯ ನಾಯಕರು ಗುರುತಿಸಿ ಮತ್ತೂಮ್ಮೆ ತುಮ ಕೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು. ಆಗ ಜೆಡಿಎಸ್‌ ಕೂಡ ಶಕ್ತಿ ತಂದಿದೆ. ನನ್ನ ಗೆಲುವಿನಲ್ಲಿ ಜೆಡಿಎಸ್‌ ಪಾತ್ರವೂ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next