Advertisement

ಆರೋಗ್ಯ ಸಮಸ್ಯೆಯಿಂದಾಗಿ ಬೀದರ್ ನ ಯೋಧ ಕಾಶ್ಮೀರದಲ್ಲಿ ಸಾವು

10:12 PM Sep 25, 2022 | Team Udayavani |

ಬೀದರ್ : ಆರೋಗ್ಯ ಸಮಸ್ಯೆ ಹಾಗೂ ಆಮ್ಲಜನಕ ಕೊರತೆ ಉಂಟಾಗಿ ಕಮಲನಗರ ತಾಲೂಕಿನ ಯೋಧರೊಬ್ಬರು ಸಾವನಪ್ಪಿರುವ ಘಟನೆ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಗುರಜ್ ನಲ್ಲಿ ನಡೆದಿದೆ.

Advertisement

ರಾಮದಾಸ್ ಧನರಾಜ ಚಂದಾಪುರೆ (35) ಮೃತ ಯೋಧ. 2006ರಲ್ಲಿ ಸೇನೆಗೆ ಸೇರಿದ್ದ ರಾಮದಾಸ್ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಹೈದರಾಬಾದ್ ನಿಂದ ಜಮ್ಮು ಕಾಶ್ಮೀರದಿಂದ 125 ಕಿ.ಮೀ. ಅಂತರದಲ್ಲಿರುವ ಗುರೇಜ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಯೋಧ ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಮೃತ ದೇಹ ವಿಶೇಷ ವಿಮಾನದ ಮೂಲಕ ಶ್ರೀನಗರದಿಂದ ಹೈದರಾಬಾದ್ ಗೆ ತಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ಸೋಮವಾರ ಸಂಜೆ ಬರುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next