Advertisement

Soldier: ಪಾವಗಡ; ಅನಾರೋಗ್ಯದಿಂದ ಯೋಧ ನಿಧನ

02:03 PM Oct 16, 2023 | Team Udayavani |

ಪಾವಗಡ: ಅನಾರೋಗ್ಯದಿಂದ ಯೋಧರೊಬ್ಬರು ಮೃತಪಟ್ಟ ಘಟನೆ ಆ.16ರ ಭಾನುವಾರ ನಡೆದಿದೆ.

Advertisement

ಎಸ್.ಜಿ. ಸುರೇಶ್ ಕುಮಾರ್ (36) ಮೃತ ಯೋಧ.

ಪಾವಗಡ ತಾಲೂಕಿನ ಶ್ರೀರಂಗಪುರ ಗ್ರಾಮದ ಜಯರಾಮ ರೆಡ್ಡಿ, ಸುಧಮ್ಮ ದಂಪತಿಗಳ ಹಿರಿಯ‌ ಪುತ್ರ ಸುರೇಶ್ ಕುಮಾರ್.

ಬಿಎಸ್ಎಫ್ ಯೋಧನಾಗಿದ್ದ ಸುರೇಶ್ ಪಂಜಾಬ್ ನ ಪಠಾಣ್ ಕೋಟ್ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕಿಡ್ನಿ ವೈಪಲ್ಯದಿಂದ ಚಂಡಿಗಢ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಸಾವನಪ್ಪಿದರು.

ಒಂದು ತಿಂಗಳ ಹಿಂದೆ ಊರಿಗೆ ಬಂದು ಹೋಗಿದ್ದ ಯೋಧ ಸುರೇಶ್,‌ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Advertisement

ಯೋಧ ಸುರೇಶ್ ಅವರ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ ಆಗಮಿಸಲಿದ್ದು, ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next