Advertisement

ರೆಂಜ-ಮುಡಿಪುನಡ್ಕ ರಸ್ತೆಯಲ್ಲಿ ಮಣ್ಣು: ಸಂಚಾರಕ್ಕೆ ಅಡ್ಡಿ

11:24 AM May 26, 2018 | Team Udayavani |

ನಿಡ್ಪಳ್ಳಿ : ರೆಂಜದಿಂದ ಮುಡಿಪುನಡ್ಕಕ್ಕೆ ತೆರಳುವ ಜಿಲ್ಲಾ ಪಂಚಾಯತ್‌ ರಸ್ತೆ ಮೇಲೆ ಮಳೆ ನೀರಿನೊಂದಿಗೆ ಮಣ್ಣು ಹರಿದು ಸಂಚಾರಕ್ಕೆ ಅಡಚಣೆಯಾಗಿದೆ. ಖಾಸಗಿ ಟೆಲಿಫೋನ್‌ ಸಂಸ್ಥೆಯವರು ಒಎಫ್ಸಿ ಕೇಬಲ್‌ ಅಳವಡಿಸಲು ನೀರು ಹೋಗುವ ಚರಂಡಿಯಲ್ಲಿ ಹೊಂಡ ತೆಗೆದ ಪರಿಣಾಮ ಚರಂಡಿ ಮುಚ್ಚಿ ಹೋಗಿದೆ. ಮಳೆ ಬಂದಾಗ ನೀರು ರಸ್ತೆ ಮೇಲೆ ಹರಿದು ಮಣ್ಣು ನೀರಿನೊಂದಿಗೆ ಬಂದು ರಸ್ತೆ ಕೆಸರುಮಯವಾಗುತ್ತಿದೆ.

Advertisement

ಇದರಿಂದ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ಅಡ್ಡಿಯಾಗುತ್ತಿದ್ದು, ರಸ್ತೆಯೂ ಹಾಳಾಗುತ್ತಿದೆ. ಮಳೆಗಾಲ ಆರಂಭಕ್ಕೆ ಮೊದಲು ಚರಂಡಿ ವ್ಯವಸ್ಥೆ ಮಾಡದಿದ್ದರೆ ರಸ್ತೆ ಇನ್ನಷ್ಟು ಹದಗೆಡಲಿದೆ. ಕಾರ್ಮಿಕರಲ್ಲಿ ವಿಚಾರಿಸಿದರೆ ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಉತ್ತರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next