Advertisement

ರಾಮಾಯಣದಲ್ಲಿವೆ ಸಾಮಾಜಿಕ ಮೌಲ್ಯಗಳು; ಜಿಲ್ಲಾಧಿಕಾರಿ ದಾನಮ್ಮ

06:35 PM Oct 10, 2022 | Nagendra Trasi |

ವಿಜಯಪುರ: ವಾಲ್ಮೀಕಿ ಮಹರ್ಷಿ ಭಾರತ ದೇಶ ಕಂಡ ಹಲವಾರು ಮಹಾನ್‌ ದಾರ್ಶನಿಕರಲ್ಲಿ ಒಬ್ಬರಾಗಿದ್ದಾರೆ. ಮಾತೃ, ಪಿತೃ, ಆಚಾರ್ಯ, ಅತಿಥಿ ದೇವೋಭವ ಸಂದೇಶ ನೀಡಿದವರು, ಪಿತೃ ವಾಕ್ಯ ಪರಿಪಾಲನೆಯಂತಹ ಹಲವಾರು ಸಾಮಾಜಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್‌ ಸಂತರು ಎಂದು ಜಿಲ್ಲಾಧಿಕಾರಿ ಡಾ| ವಿ.ಬಿ. ದಾನಮ್ಮನವರ ಅಭಿಪ್ರಾಯಪಟ್ಟರು.

Advertisement

ರವಿವಾರ ನಗರದ ಕಂದಗಲ್ಲ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ಮಹಾಕಾವ್ಯದಲ್ಲಿ ಸಮಾಜಕ್ಕೆ ಅಗತ್ಯ ಇರುವ ಎಲ್ಲ ಮಾನವೀಯ ಮೌಲ್ಯಗಳನ್ನು ಕಾಣಲು ಸಾಧ್ಯವಿದೆ. ಜಾಗತಿಕವಾಗಿ ಹೆಸರಾದ ಈ ಮಹಾಕಾವ್ಯದಲ್ಲಿನ ಹಲವಾರು ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.

ಅಲ್ಲಿನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ವಿಶೇಷ ಉಪನ್ಯಾಸ ನೀಡಿದ ಬಬಲೇಶ್ವರದ ಶಾಂತವೀರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ| ಮಹಾದೇವ ರೆಬಿನಾಳ, ಮಹಾತ್ಮ ನೆಲೆಯಾಗಿರುವ ಭಾರತದಲ್ಲಿ ನಾವು ಪುಣ್ಯವಂತರು. ರಾಮಾಯಣ ಮತ್ತು ಅಲ್ಲಿನ ಉಪ ಕಥೆಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಿವೆ.ಸೂರ್ಯ ಚಂದ್ರರು ಇರುವವರೆಗೂ ರಾಮಾಯಣ ಅಮರ ಕಾವ್ಯವಾಗಿ ಹಾಗೂ ವಾಲ್ಮೀಕಿ ಕೂಡ ಅಮರರಾಗಿರುತ್ತಾರೆ ಎಂದರು.

ಎಡಿಸಿ ರಮೇಶ ಕಳಸದ, ಪರಿಶಿಷ್ಟ ವರ್ಗಗಳ ಅಪರ ಕಾರ್ಯದರ್ಶಿ ಎಸ್‌.ಎಂ. ವಾಲಿ, ಜಿಪಂ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ವಾಲ್ಮೀಕಿ ಸಮುದಾಯದ ಮುಖಂಡರಾದ ಅಖೀಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಬಿ.ಎಸ್‌. ಗಸ್ತಿ, ಎ.ಎಸ್‌. ರೆಬಿನಾಳ, ಎಸ್‌.ಡಿ. ದುರಗಣ್ಣವರ, ಭಾರತಿ ಕೌಲಗಿ, ಚನ್ನಮ್ಮ ಬಟಗಿ, ಮಹಾದೇವ ನಾಟೀಕರ ವೇದಿಕೆಯಲ್ಲಿದ್ದರು.

ಮಳಸಿದ್ದ ನಾಯಕವಾಡಿ, ಲಕ್ಷ್ಮಣ ಕೋಳುರಗಿ, ಈರಪ್ಪ ಯಡಹಳ್ಳಿ, ಅಮಿತ್‌ ನಾಯಕವಾಡಿ, ಎಸ್‌. ಎಲ್‌. ನಾಟೀಕಾರ, ಮಹಾದೇವ ವಾಲೀಕಾರ, ಮಂಜುನಾಥ ಆರೇಶಂಕರ, ಬಿ.ಕೆ. ತೊಂಡೆನವರ, ಬಾಬು ಜಾನಮಟ್ಟಿ, ವಿಶ್ವನಾಥಗೌಡ ಬಟಗಿ, ಎಸ್‌.ಎಸ್‌. ಬೇಡರ, ಬಿ.ಎಸ್‌. ರೆಬಿನಾಳೆ, ಕಾವೇರಿ ಬಟಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಉಮೇಶ ಶಿರಹಟ್ಟಿಮಠ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಂ.ಎಸ್‌. ಬರಗಿಮಠ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಭೀಮರಾಯ್‌ ಜಿಗಜಿಣಗಿ, ದೇವೇಂದ್ರ ಮಿರೇಕರ ಹಾಗೂ ಇತರರು ಇದ್ದರು.

Advertisement

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾಮನಗೌಡ ಕನ್ನೊಳ್ಳಿ ಸ್ವಾಗತಿಸಿದರು. ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿ ಕಾರಿ ರಾಜಶೇಖರ ದೈವಾಡಿ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪುಂಡಲೀಕ ಮಾನವರ ವಂದಿಸಿದರು.

ಮೆರವಣಿಗೆ: ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಗೆ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಧಿಕಾರಿ ಡಾ| ವಿ.ಬಿ. ದಾನಮ್ಮನವರ, ಎಎಸ್ಪಿ ಡಾ| ರಾಮ್‌ ಅರಸಿದ್ದಿ ಜಂಟಿಯಾಗಿ ಚಾಲನೆ ನೀಡಿದರು. ವಿವಿಧ ಜಾನಪದ ಕಲಾ ತಂಡಗಳೊಂದಿಗೆ ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಗಾಂಧಿಧೀಜಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಕನಕದಾಸ ವೃತ್ತದ ಮಾರ್ಗವಾಗಿ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗಮಂದಿರಕ್ಕೆ ಬಂದು ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next