Advertisement

ಹಿಮಪಾತ: ಐವರ ಸಾವು

12:30 AM Jan 19, 2019 | Team Udayavani |

ಶ್ರೀನಗರ: ಲಡಾಖ್‌ನ ಕರ್ದುಂಗ್‌ ಲಾ ಪ್ರದೇಶದಲ್ಲಿ ಶುಕ್ರವಾರ ಉಂಟಾದ ಹಿಮಪಾತದಿಂದ ಐವರು ಸಾವಿಗೀಡಾಗಿ, ಐವರು ಕಣ್ಮರೆಯಾಗಿರುವ ಘಟನೆ ನಡೆದಿದೆ. ಬೆಳಗ್ಗೆ 7 ಗಂಟೆ ವೇಳೆ 10 ಮಂದಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿದೆ. ಹಿಮಪಾತದಿಂದಾಗಿ ಇಡೀ ಟ್ರಕ್‌ ಹಿಮದಡಿ ಹೂತು ಹೋಗಿದ್ದು, ತಕ್ಷಣ ಗಡಿ ರಸ್ತೆ ಸುರಕ್ಷತಾ ಪಡೆಯ ಸಿಬಂದಿ ಸ್ಥಳಕ್ಕೆ ತೆರಳಿ, ಯಂತ್ರೋಪ ಕರಣಗಳ ಸಹಾಯದಿಂದ  ರಕ್ಷಣಾ ಕಾರ್ಯ ನಡೆಸಿದ್ದಾರೆ. ಐವರ ದೇಹ ಪತ್ತೆಯಾಗಿದ್ದು, ಇನ್ನೂ ಐವರು ಹಿಮದಡಿ ಸಿಲುಕಿದ್ದು, ಅವರ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next