Advertisement

Kannada Cinema; ‘ಸ್ನೇಹರ್ಷಿ’ ಇಂದು ತೆರೆಗೆ

10:04 AM Dec 14, 2023 | Team Udayavani |

“ಮೇಲುಕೋಟೆ ಚೆಲುವ ನಾರಾಯಣ ವೆಂಚರ್’ ಬ್ಯಾನರ್‌ನಲ್ಲಿ ಕಿರಣ್‌ ನಾರಾಯಣ್‌ ನಿರ್ಮಿಸಿ, ನಿರ್ದೇಶಿಸಿ ಮತ್ತು ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ “ಸ್ನೇಹರ್ಷಿ ’ ಸಿನಿಮಾ ಇಂದು ತೆರೆಗೆ ಬರುತ್ತಿದೆ.

Advertisement

ಲವ್‌ ಕಂ ಆ್ಯಕ್ಷನ್‌ ಕಥಾ ಹಂದರ ಹೊಂದಿರುವ “ಸ್ನೇಹರ್ಷಿ’ ಸಿನಿಮಾದ ಹಾಡುಗಳಿಗೆ ಆಕಾಶ್‌ ಅಯ್ಯಪ್ಪ ಸಂಗೀತ ನೀಡಿದ್ದಾರೆ. “ಸ್ನೇಹರ್ಷಿ’ ಸಿನಿಮಾದಲ್ಲಿ ಕಿರಣ್‌ ನಾರಾಯಣ್‌ ಅವರಿಗೆ ನಾಯಕಿಯಾಗಿ ಸಂಜನಾ ಅಭಿನಯಿಸಿದ್ದಾರೆ. ಉಳಿದಂತೆ ಸುಧಾ ಬೆಳ ವಾಡಿ, ಚಕ್ರವರ್ತಿ, ನವೀನ್‌, ದೇವಕಿ, ರಂಗನಾಥ್‌ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಇದು ನಮ್ಮ ನಡುವೆಯೇ ನಡೆಯುವ ಕಥೆ. ಇಲ್ಲಿಯವರೆಗೂ ಯಾರೂ ಹೇಳದ ಕೆಲವೊಂದು ವಿಷಯವನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ.

ಪ್ರತಿನಿತ್ಯ ಎಲ್ಲರೂ ಅನುಭವಿಸುವ ಆದರೆ ಯಾರೂ ಮಾತನಾಡದ ಸಮಸ್ಯೆಯೊಂದರ ಬಗ್ಗೆ ನಮ್ಮ ಸಿನಿಮಾ ಮಾತನಾ ಡುತ್ತದೆ. ಮೆಟ್ರೋಪಾಲಿಟನ್‌ನಂಥ ಸಿಟಿಯಲ್ಲಿ ಪ್ರತಿನಿತ್ಯ ಬಹುತೇಕರು ಅನುಭವಿಸುವ ಬ್ಲೂ ಕಾಲರ್‌ ಪ್ರಾಬ್ಲಿಂ ಸುತ್ತ ನಮ್ಮ ಸಿನಿಮಾದ ಕಥೆ ನಡೆಯುತ್ತದೆ. ಒಂದು ಗಂಭೀರ ಸಬ್ಜೆಕ್ಟ್ ಆದ್ರೂ ಅದಕ್ಕೆ ಒಂದಷ್ಟು ಸಿನಿಮ್ಯಾಟಿಕ್‌ ಅಂಶಗಳನ್ನು ಸೇರಿಸಿ ಕಂಪ್ಲೀಟ್‌ ಫ್ಯಾಮಿಲಿ ಮತ್ತು ಮಾಸ್‌ ಎಂಟರ್‌ಟೈನರ್‌ ಕಂಟೆಂಟ್‌ ಜೊತೆ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎನ್ನುತ್ತಾರೆ ಕಿರಣ್‌.

Advertisement

Udayavani is now on Telegram. Click here to join our channel and stay updated with the latest news.

Next