Advertisement

ಎಳನೀರು ರಾಶಿಯಲ್ಲಿ ಅವಿತ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಉರಗ ಪ್ರೇಮಿ

03:06 PM Mar 16, 2024 | Team Udayavani |

ದಾಂಡೇಲಿ: ಒಂದು ಕಡೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬಿಸಿಲು. ಬಿಸಿಲಿನ ರಣ ತಾಪಕ್ಕೆ ಎಳನೀರು ವ್ಯಾಪಾರ ಭರ್ಜರಿಯಾಗತೊಡಗಿದೆ.

Advertisement

ಅಂದ ಹಾಗೆ ನಗರದ ಬರ್ಚಿ ರಸ್ತೆಯಲ್ಲಿ ಶನಿವಾರ ಎಳನೀರು ವ್ಯಾಪಾರಿಯೊಬ್ಬರ ಮಾರಾಟಕ್ಕಿಟ್ಟಿದ್ದ ಎಳನೀರು ರಾಶಿಯಲ್ಲಿ ನಾಗರ ಹಾವೊಂದು ಅವಿತು ಕೂತು, ಕೆಲ ಹೊತ್ತು ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು.

ತಕ್ಷಣವೇ ಉರಗ ಪ್ರೇಮಿ ರಜಾಕ್ ಶಾ ಅವರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ರಜಾಕ್ ಶಾ  ಸುರಕ್ಷಿತವಾಗಿ ನಾಗರಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬರುವುದರ ಮೂಲಕ ವನ್ಯ ಕಾಳಜಿ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next