Advertisement

ಹರಪನಹಳ್ಳಿ:  ಹಾವು ಕಚ್ಚಿ ರೈತ ಸಾವು

06:45 PM Sep 16, 2021 | Team Udayavani |

ಹರಪನಹಳ್ಳಿ: ಜಮೀನಿನಲ್ಲಿ ಕೆಲಸ ಮಾಡುವಾಗ ವಿಷ ಹಾವು ಕಚ್ಚಿ ರೈತನೋರ್ವ ಮೃತಪಟ್ಟ ಘಟನೆ ಗುರುವಾರ ತಾಲೂಕಿನ ಅರಸೀಕೆರೆ ಸಮೀಪದ ಜಂಗಮ ತುಂಬಿಗೆರೆ ಗ್ರಾಮದಲ್ಲಿ ನಡೆದಿದೆ.

Advertisement

ಮೈಲಪ್ಪ (38) ಹೆಸರಿನ ರೈತ ಮೃತ ದುರ್ದೈವಿ. ಈತನಿಗೆ ಇಂದು ಮಧ್ಯಾಹ್ನ ಕೃಷಿ ಜಮೀನಿನಲ್ಲಿ ಮೆಕ್ಕೆಜೋಳದ ಸೂಲಂಗಿ ಸಿಪ್ಪೆ ಕಟಾವು ಮಾಡುವ ವೇಳೆ ಹಾವು ಕಚ್ಚಿದೆ. ತಕ್ಷಣ ಅಕ್ಕಪಕ್ಕದಲ್ಲಿರುವ ರೈತರು ಧಾವಿಸಿ ಖಾಸಗಿ ವಾಹನ ಮೂಲಕ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಪಟ್ಟರಾದರೂ, ಮಾರ್ಗಮಧ್ಯೆ ಸಾವನ್ನಪ್ಪಿದ. ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next