Advertisement

ನಾಳೆ ಡಾ|ಸಂಧ್ಯಾ ಎಸ್‌. ಪೈ ಅವರ “ಸ್ಮೃತಿ ಗಂಧವತೀ’ಕೃತಿ ಬಿಡುಗಡೆ

07:50 PM Dec 02, 2022 | Team Udayavani |

ಬೆಂಗಳೂರು: “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌. ಪೈ ಅವರು ರಚಿಸಿದ “ಸ್ಮೃತಿ ಗಂಧವತೀ’ ಕೃತಿಯನ್ನು ಪ್ರಸಿದ್ಧ ಸಾಹಿತಿ ಡಾ| ಎಚ್‌. ಎಸ್‌. ವೆಂಕಟೇಶಮೂರ್ತಿ ಅವರು ಡಿ. 4ರಂದು ಬಿಡುಗಡೆಗೊಳಿಸಲಿದ್ದಾರೆ.

Advertisement

ಈ ಕಾರ್ಯಕ್ರಮವು ಅಂಕಿತ ಪುಸ್ತಕ ಪ್ರಕಾಶನ ಮತ್ತು ಬುಕ್‌ ಬ್ರಹ್ಮ ಸಹಯೋಗದಲ್ಲಿ ರವಿವಾರ ಪೂರ್ವಾಹ್ನ 11 ಗಂಟೆಗೆ ಬುಕ್‌ಬ್ರಹ್ಮ ಆನ್‌ಲೈನ್‌ ವೇದಿಕೆಯ ಮುಖಾಂತರ ಜರಗಲಿದೆ.

ಪ್ರಸಿದ್ಧ ಲೇಖಕಿ ನಂ. ನಾಗಲಕ್ಷ್ಮಿಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next