Advertisement

ಕ್ಷೇತ್ರದಲ್ಲಿದೆ ಗುಲಾಮಗಿರಿ: ನಡಹಳ್ಳಿ

03:10 PM May 01, 2018 | |

ಮುದ್ದೇಬಿಹಾಳ: ಈ ಬಾರಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಬಿಜೆಪಿ ಅಭ್ಯರ್ಥಿ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ತಾಲೂಕಿನ ಬಿದರಕುಂದಿ, ಯರಝರಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಗುಲಾಮಗಿರಿ ಪದ್ಧತಿ ಇನ್ನೂವರೆಗೂ ಇದೆ. ದಲಿತ ಹಾಗೂ ಮುಸ್ಲಿಮರನ್ನು ವೋಟ್‌ಬ್ಯಾಂಕ್‌ ಮಾಡಿಕೊಂಡು ಅವರನ್ನು ಇಲ್ಲಿವರೆಗೂ ಬಂ ಧಿತ ವ್ಯವಸ್ಥೆಯಲ್ಲಿಯೆ ಇರಿಸಲಾಗಿದ್ದು ಎಲ್ಲರೂ ಸ್ವತಂತ್ರಗೊಳ್ಳಬೇಕೆಂದರೆ ಬಿಜೆಪಿಗೆ ಮತ ಚಲಾಯಿಸಬೇಕು ಎಂದರು.

ಈ ಭಾಗದಲ್ಲಿ ನೀರಾವರಿ ಸೌಲಭ್ಯ ಮಾಡಲಾಗುತ್ತದೆ ಎಂದು ಕೂಡಲಸಂಗಮದಲ್ಲಿ ಆನೆ ಮಾಡಿದ್ದ ಸಿದ್ದರಾಮಯ್ಯ ನಿದ್ರಾವಸ್ಥೆಯಲ್ಲಿಯೇ ಜನತೆ ನೀಡಿದ ಅಧಿಕಾರ ಅನುಭವಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಅತಿ ಹೆಚ್ಚು ನೀರಾವರಿ ಮಾಡಲಾಗಿದೆ ಎಂದು ಹೇಳುತ್ತಿದ್ದು ಜನರ ಕಣ್ಣಿಗೆ ಮಣ್ಣೇರಚುವ ಕೆಲಸ ಮಾಡುತ್ತಿದ್ದಾರೆ ಎಂದರು.

ಶಿವಶಂಕರಗೌಡ ಹಿರೇಗೌಡರ, ಮಲ್ಲಣ್ಣ ಹತ್ತಿ, ಮಲಕೇಂದ್ರರಾಯಗೌಡ ಪಾಟೀಲ, ಪ್ರಭುಗೌಡ ದೇಸಾಯಿ, ಎಂ.ಎಸ್‌. ಪಾಟೀಲ, ರಾಜು ರಾಯಗೊಂಡ, ಹೇಮರಡ್ಡಿ ಮೇಟಿ, ಯಮನಪ್ಪ ಹಾಲವಾರ, ಮುತ್ತಣ್ಣ ಹುಗ್ಗಿ, ಲಕ್ಷ್ಮಣ ಬಿಜ್ಜೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next