Advertisement
ವಿ.ಎಚ್.ಡಿ. ಕೇಂದ್ರೀಯ ಗೃಹ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಾಂಸ್ಕೃತಿಕ ಸಂಘ ಹಾಗೂ ವಿವಿಧ ಸಂಘಗಳ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದ ಅವರು, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ಸಿಗುತ್ತಿಲ್ಲ ಎಂದು ತಿಳಿಸಿದರು.
Related Articles
Advertisement
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪ್ರತಿಯೊಬ್ಬರು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಕಾಲೇಜಿನಲ್ಲಿ ಜಾತಿ ವ್ಯವಸ್ಥೆ ಇರಬಾರದು. ಎಲ್ಲರ ಸಂಪ್ರದಾಯ, ಆಚರಣೆ ಗೌರವಿಸಬೇಕು. ಆದರೆ ದೇಶ ಕಟ್ಟಲು ಏನು ಬೇಕು ಎಂಬದನ್ನು ಯೋಚಿಸಬೇಕಿದೆ. ವಿದ್ಯಾರ್ಥಿಗಳು ಪೂರ್ವ ಗ್ರಹಪೀಡಿತರಾಗಬಾರದು ಎಂದು ಸಲಹೆ ನೀಡಿದರು.
ಬಿಬಿಎಂಪಿ ಸದಸ್ಯೆ ಆರ್.ಜೆ.ಲತಾ ರಾಥೋಡ್, ಪ್ರಾಂಶುಪಾಲರಾದ ಪ್ರೊ.ನಜೀಬಾ ಖಾನಂ, ಸಾಂಸ್ಕೃತಿಕ ಹಾಗೂ ಕನ್ನಡ ಸಂಘದ ಸಂಚಾಲಕಿ ಡಾ. ಸೆಲ್ವ ಕುಮಾರಿ, ಕ್ರೀಡಾ ವಿಭಾಗದ ಸಂಚಾಲಕ ಡಾ. ಜಗದೀಶ್ ಕುಮಾರ್, ಎನ್ಸಿಸಿ ಅಧಿಕಾರಿ ಡಾ. ನೀತಾ ಪಠಾಣ್, ನಟಿ ಅಶ್ವಿನಿ ಶೆಟ್ಟಿ ಉಪಸ್ಥಿತರಿದ್ದರು.
ಸಂಪ್ರದಾಯ ಮರೆಯಬೇಡಿ: ನಮ್ಮ ಸಂಪ್ರದಾಯ ಮರೆಯಾಗುತ್ತಿದೆ. ಮಹಿಳೆಯರು ಹಣೆಗೆ ಕುಂಕುಮ ಇಡುತ್ತಿಲ್ಲ. ಹಿಂದೆ ವಿಚ್ಛೇಧನೆ ಎಂಬ ಪದವೇ ಇರಲಿಲ್ಲ. ಈಗ ಪ್ರೀತಿಸಿ ಮದುವೆಯಾಗಿ ಒಂದು ತಿಂಗಳಲ್ಲಿ ವಿಚ್ಛೇಧನೆ ಪಡೆಯುತ್ತಾರೆ. ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ವಿದ್ಯಾರ್ಥಿಗಳು ಎಲ್ಲ ವಿಷಯದಲ್ಲೂ ಎಚ್ಚರದಿಂದ ಇರಬೇಕು. ಪ್ರೀತಿ ಮತ್ತು ಸ್ನೇಹದ ಅರ್ಥ ತಿಳಿದುಕೊಳ್ಳಬೇಕು. ಪೇಲಾದಾಗ ಆತ್ಮಹತ್ಯೆ ಪರಿಹಾರ ಅಲ್ಲ. ನಾನು ಮೈಸೂರು ರಾಜವಂಶಸ್ಥರ ವಿರುದ್ಧ ಸ್ಪರ್ಧಿಸಿ ಸೋತ್ತಿದ್ದೆ, ಆದರೂ, ಛಲ ಬಿಟ್ಟಿಲ್ಲ. ಈಗ ಉನ್ನತ ಶಿಕ್ಷಣ ಸಚಿವನಾಗಿದ್ದೇನೆ ಎಂದು ಸಚಿವ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಬುದ್ಧಿ ಮಾತು ಹೇಳಿದರು.