Advertisement

ಆರು ಅಂಗಡಿ ಕಳ್ಳತನ: ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

03:14 PM Aug 28, 2022 | Team Udayavani |

ಚಿತ್ತಾಪುರ: ಪಟ್ಟಣದ ಆರು ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಪಟ್ಟಣದ ಆರು ಅಂಗಡಿಗಳ ಶೆಟರ್‌ ಮುರಿದು ಕಳ್ಳತನದ ಯತ್ನ ಮಾಡುತ್ತಿರುವ ಕಳ್ಳನ ಕೈಚಳಕ ಜನತಾ ಮೆಡಿಕಲ್‌ನಲ್ಲಿರುವ ಸಿಸಿ ಕ್ರಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

Advertisement

ಶನಿವಾರ ಎಂಎಲ್‌ಸಿ ಬಾಬುರಾವ ಚಿಂಚನಸೂರ ಅವರ ಅಭಿನಂದನಾ ಸಮಾರಂಭದ ನಿಮಿತ್ತ ಬಿಜೆಪಿ ಕಾರ್ಯಕರ್ತರು ಶುಕ್ರವಾರ ರಾತ್ರಿಯಿಡಿ ಎಲ್ಲ ರಸ್ತೆಗಳಲ್ಲಿ ಬ್ಯಾನರ್‌ ಕಟ್ಟುವ ಕೆಲಸದಲ್ಲಿ ಎಲ್ಲೆಂದರಲ್ಲಿ ಕಾರ್ಯಕರ್ತರ ದಂಡೇ ಇದ್ದರೂ ಕಳ್ಳತನ ನಡೆದಿದೆ.

ಪಟ್ಟಣದ ಜನತಾ ಮೆಡಿಕಲ್‌, ಸಂಜೀವಿನಿ ಮೆಡಿಕಲ್‌, ವಸೀಂ ತಹಾರಿ ಹೊಟೇಲ್‌, ಎಸ್‌.ಎನ್‌. ಟೇಲರ್‌, ಇಮ್ತಿಯಾಜ ತರಕಾರಿ ಅಂಗಡಿ, ಡಾ| ಪ್ರಭುರಾಜ ಕಾಂತಾ ಕ್ಲಿನಿಕ್‌ ಸೇರಿದಂತೆ ಆರು ಅಂಗಡಿಗಳ ಕಳ್ಳತನ ಆದ ಪ್ರಕರಣ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಚಿತ್ತಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next