Advertisement

ಸಹೋದರಿಯರಿಬ್ಬರ ಗ್ಯಾಂಗ್ ರೇಪ್, ಬರ್ಬರ ಹತ್ಯೆ ; ಆರು ಮಂದಿ ಬಂಧನ

02:48 PM Sep 15, 2022 | Team Udayavani |

ಲಖಿಂಪುರ ಖೇರಿ: ಅತ್ಯಾಚಾರ ಎಸಗಿ ಇಬ್ಬರು ಬಾಲಕಿಯರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

15 ಮತ್ತು 17 ವರ್ಷದ ಸಹೋದರಿಯರಿಬ್ಬರ ಮೃತ ದೇಹಗಳನ್ನು ಅವರ ಮನೆಯಿಂದ ಒಂದು ಕಿ.ಮೀ ದೂರವಿರುವ ಕಬ್ಬಿಣ ಗದ್ದೆಗಳ ಪಕ್ಕದಲ್ಲಿರುವ ಮರದಲ್ಲಿ ನೇತು ಹಾಕಲಾಗಿತ್ತು. ನಿಘಾಸಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಈ ಪ್ರಕರಣ ನಡೆದಿದೆ.

”ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಜುನೈದ್, ಸೊಹೈಲ್, ಹಫೀಜುರ್ ರೆಹಮಾನ್, ಕರೀಮುದ್ದೀನ್, ಆರಿಫ್ ಮತ್ತು ಚೋಟು ಎಂಬ ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಲಖಿಂಪುರ ಖೇರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಪ್ರಾಥಮಿಕ ತನಿಖೆಯ ಪ್ರಕಾರ, ಜುನೈದ್ ಮತ್ತು ಸೊಹೈಲ್ ಇಬ್ಬರು ಸಹೋದರಿಯರೊಂದಿಗೆ ಸಂಬಂಧ ಹೊಂದಿದ್ದರು.ಜುನೈದ್ ಮತ್ತು ಸೊಹೈಲ್ ಅವರ ಮನವೊಲಿಸಿದ ನಂತರ ಇಬ್ಬರು ಸಹೋದರಿಯರು ಬುಧವಾರ ಮಧ್ಯಾಹ್ನ ತಮ್ಮ ಮನೆಯಿಂದ ಹೊರಬಂದಿದ್ದರು. ಜುನೈದ್ ಮತ್ತು ಸೊಹೈಲ್ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ನಂತರ ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ಎಸ್ಪಿ ಹೇಳಿದರು.

”ಹತ್ಯೆಯ ನಂತರ ದೇಹಗಳನ್ನು ವಿಲೇವಾರಿ ಮಾಡಲು ಇಬ್ಬರೂ ಕರೀಮುದ್ದೀನ್ ಮತ್ತು ಆರಿಫ್ ಅವರನ್ನುಕರೆದಿದ್ದು ಎಲ್ಲರೂ ಸೇರಿ ದೇಹಗಳನ್ನು ಮರಕ್ಕೆ ನೇಣು ಹಾಕಿಕೊಂಡ ರೀತಿಯಲ್ಲಿ ನೇತು ಹಾಕಿ, ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ” ಎಂದು ಸುಮನ್ ಹೇಳಿದ್ದಾರೆ.

Advertisement

ಬಾಲಕಿಯರ ತಾಯಿ ತನ್ನ ಮಕ್ಕಳನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next