Advertisement

ಇಂಜಿನಿಯರಿಂಗ್‌ ವಿದ್ಯಾರ್ಥಿ ಅಪಹರಣ; 6 ಮಂದಿ ಅರೆಸ್ಟ್‌

05:32 PM Oct 06, 2017 | udayavani editorial |

ಭುವನೇಶ್ವರ : ನಗರದಲ್ಲಿನ ಖಾಸಗಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಯನ್ನು ಅಪಹರಿಸಿದ ಆರೋಪದ ಮೇಲೆ ನಗರ ಪೊಲೀಸ್‌ ಕಮಿಷನರೇಟ್‌ ಆರು ಮಂದಿಯನ್ನು ಬಂಧಿಸಿದ್ದಾರೆ; ಇವರಲ್ಲಿ ಇಬ್ಬರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದಾರೆ.

Advertisement

ಬಂಧಿತರನ್ನು ದೇವ ಅರ್ಪಿತ್‌ ಮಿಶ್ರಾ, ಪ್ರಿಯ ರಂಜನ್‌ ಮಲ್ಲಿಕ್‌, ಜ್ಯೋತಿ ಪ್ರಕಾಶ್‌ ಮೋಹಂತಿ, ಚಂದನ್‌ ದಕುವಾ, ಗಿರೀಶ್‌ ನಾಯ್ಡು ಮತ್ತು ಅಭಿಮನ್ಯು ದಾಸ್‌ ಎಂದು ಗುರುತಿಸಲಾಗಿದೆ.

ನಿನ್ನೆ ಗುರುವಾರ ಆರೋಪಿಗಳು ಖಂಡಗಿರಿಯಲ್ಲಿನ ಜಗಮಾರಾ ಪ್ರದೇಶದ ನಿವಾಸಿಯಾಗಿರುವ ಅನುಜ್‌ ಝಾ ಎಂಬ ಇಂಜಿನಿಯರಿಂಗ್‌ ವಿದ್ಯಾರ್ಥಿಯನ್ನು ಅಪಹರಿಸಿ ಆತನ ಬಿಡುಗಡೆಗೆ ಒತ್ತೆ ಹಣವನ್ನು ಕೇಳಿದ್ದರು. ಅನುಜ್‌ ಝಾ ನ ಹಿರಿಯ ಸಹೋದರ ಅಪಹರಣದ ಬಗ್ಗೆ ದೂರು ದಾಖಲಿಸಿದ್ದರು. ಆ ಪ್ರಕಾರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. 

ಗುರುವಾರ ರಾತ್ರಿ ಆರೋಪಿಗಳು ನಗರದತ್ತ ಬರವಾಗ ಅವರನ್ನು ಪೊಲೀಸ್‌ ಕಮಿಷನರೇಟ್‌ ಸಿಬಂದಿಗಳು ಫ‌ೂಲ್‌ನಖರಾ ಸಮೀಪ ಬಂಧಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next