Advertisement

ಯಡಿಯೂರಪ್ಪ ಸಿಎಂ ಆದಾಗ ಪರಿಸ್ಥಿತಿ ಚೆನ್ನಾಗಿರಲಿಲ್ಲ: ಸಚಿವ ಮಾಧುಸ್ವಾಮಿ

02:11 PM Sep 24, 2022 | |

ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಪರಿಸ್ಥಿತಿ ಚೆನ್ನಾಗಿರಲಿಲ್ಲ, ಸಿಎಂ ಆದ ತಕ್ಷಣ ನೆರೆಪೀಡಿತ ಸ್ಥಳಗಳಿಗೆ ಓಡಿ ಹೋಗಬೇಕಾಯಿತು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

Advertisement

ರಾಜ್ಯದ ಕೆರೆ ತುಂಬಿಸಲು ಒಂದು ಲಕ್ಷ ಕೋಟಿ ಮೀಸಲಿಡಲು ತೀರ್ಮಾನಿಸಿದ್ದರು. ಆದರೆ, ಅಂದು ನಮ್ಮ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ. ಆನಂತರ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಸರ್ಕಾರ ನಡೆಸುತ್ತಿರುವುದು ಸುಲಭದ ಮಾತಾಗಿಲ್ಲ. ಯಾರು ಏನು ಬೇಕಾದರೂ ಮಾತನಾಡಬಹುದು. ಆಕಾಶಕ್ಕೆ ಏಣಿ ಹಾಕುತ್ತೇನೆ ಎನ್ನಬಹುದು. ಆದರೆ, ಪರಿಸ್ಥಿತಿ ಹಾಗಿಲ್ಲ. ಯಾರ್ಯಾರು ಏನು ಮಾಡಿದ್ದಾರೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ ಎಂದರು.

ಟ್ಯಾಕ್ಸ್ ಕಟ್ಟಲು ಹಣವಿಲ್ಲ: ಸಿರಿಗೆರೆ ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯರು ಬರೆದಿರುವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮಾಧುಸ್ವಾಮಿ, ನನ್ನ ಬಳಿ ಟ್ಯಾಕ್ಸ್ ಕಟ್ಟಲು ಹಣವಿಲ್ಲ. ಶ್ರೀಗಳು ಬರೆದಿರುವ ಪುಸ್ತಕದಲ್ಲಿ ರಾಜಕಾರಣಿಗಳ ಭಾಷಣಕ್ಕೆ ತೆರಿಗೆ ವಿಧಿಸಿದರೆ ರಾಜ್ಯದ ಬೊಕ್ಕಸ ತುಂಬುತ್ತದೆ ಎಂದು ಬರೆದಿದ್ದಾರೆ. ನನ್ನ ಬಳಿ ಟ್ಯಾಕ್ಸ್ ಕಟ್ಟಲು ಹಣವಿಲ್ಲ, ಶ್ರೀಗಳೇ ಕರೆದು ಮಾತನಾಡಿಸಿರುವುದರಿಂದ ಅವರೇ ಈ ಟ್ಯಾಕ್ಸ್ ತುಂಬಬೇಕು ಎಂದು ಮಾಧುಸ್ವಾಮಿ ಹೇಳುತ್ತಲೇ, ಶ್ರೀಗಳು ಸೇರಿದಂತೆ ಸಭೆಯಲ್ಲಿ ನಗು ಚಿಮ್ಮಿತು.

ಇದನ್ನೂ ಓದಿ:ಮಂಗಳೂರು: ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಪತ್ತೆ: ಈ ಕಾರಣದಿಂದ ನಾಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next