Advertisement

ಕಾಶ್ಮೀರ ಶಾಂತವಾಗಿದೆ; ಒಂದೇ ಒಂದು ಗುಂಡಿನ ಶಬ್ಧ ಈಗ ಕೇಳುತ್ತಿಲ್ಲ

08:25 AM Aug 12, 2019 | keerthan |

ಶ್ರೀನಗರ:  ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ನಂತರ ಕಣಿವೆ ಉದ್ರಿಕ್ತ ಸ್ಥಿತಿಯಲ್ಲಿದೆ ಎಂಬ ಮಾಧ್ಯಮ ವರದಿಯನ್ನು ಪೊಲೀಸ್ ಮೂಲಗಳು ತಳ್ಳಿಹಾಕಿದ್ದು,  ಕಳೆದೊಂದು ವಾರದಿಂದ ಜಮ್ಮು –ಕಾಶ್ಮೀರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ.

Advertisement

ಕಾಶ್ಮೀರ ಕಣಿವೆಯಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂಬ ವರದಿಗಳು ಕೆಲವು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪೊಲೀಸ್‌ ಮೂಲಗಳು ಈ ಸ್ಪಷ್ಟನೆ ನೀಡಿದೆ.

“ಕಾಶ್ಮೀರ ಕಣಿವೆ ಶಾಂತವಾಗಿದೆ , ಜನರು ಸೇನೆಯೊಂದಿಗೆ ಸಹಕಾರ ನೀಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕೆಲವು  ನಿರ್ಭಂಧಗಳನ್ನು ನಿಧಾನವಾಗಿ ಸಡಿಲಿಸಲಾಗುತ್ತಿದೆ. ಒಂದು ವಾರದಿಂದ ಒಂದು ಬಾರಿ ಕೂಡಾ ಗುಂಡಿನ ಸದ್ದು ಕೇಳಿಸಿಲ್ಲ  ಎಂದು ಪೋಲಿಸ್ ಮೂಲಗಳ ಖಚಿತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next