Advertisement

ಸಿಡಿ ಪ್ರಕರಣ : ಮತ್ತೊಬ್ಬ ಯುವಕನನ್ನ ವಶಕ್ಕೆ ಪಡೆದ ಎಸ್‌ ಐ ಟಿ!

07:01 PM Mar 14, 2021 | Team Udayavani |

ಬೀದರ್ : ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲನಗರ ತಾಲೂಕಿನ ಠಾಣಾಕುಶನೂರ ಗ್ರಾಮದ ಮತ್ತೊಬ್ಬ ಯುವಕನನ್ನು ಎಸ್‌ ಐ ಟಿ ಅಧಿಕಾರಿಗಳ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

Advertisement

ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಯ ಪರಿಚಯಸ್ಥನಾಗಿದ್ದ ಭಾಲ್ಕಿ ಪಟ್ಟಣದ ಯುವಕನನ್ನು ಕಳೆದ ಮೂರು ದಿನಗಳ ಹಿಂದೆ ಎಸ್‌ ಐ ಟಿ ತಂಡ ವಶಕ್ಕೆ ಪಡೆದಿತ್ತು.

ಯುವತಿಯ ಮೊಬೈಲ್ ನಂಬರ್ ಸಂಪರ್ಕದಲ್ಲಿದ್ದ ಎನ್ನಲಾಗಿರುವ ಠಾಣಾಕುಶನೂರಿನ ಈ ಯುವಕನನ್ನು ಸಹ ಅದೇ ದಿನ ಸುಪರ್ದಿಗೆ ಪಡೆಯಲಾಗಿದೆ. ಮೂಲತ: ಭಾಲ್ಕಿ ಪಟ್ಟಣದ ಈ ಯುವಕ ಠಾಣಾಕುಶನೂರಿನ ತನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿದು ಪ್ರೌಢ ಶಿಕ್ಷಣ ಮುಗಿಸಿ ನಂತರ ಭಾಲ್ಕಿಯಲ್ಲಿ ಪಿಯುಸಿ ಓದಿ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡದಿದ್ದ. ಸದ್ಯ ಠಾಣಾಕುಶನೂರಿನಲ್ಲಿ ಕಂಪ್ಯೂಟರ್ ಸೆಂಟರ್‌ ನಡೆಸುತ್ತಿದ್ದ. ಭಾಲ್ಕಿಯಲ್ಲೇ ಯುವಕನನ್ನು ವಶಕ್ಕೆ ಪಡೆದಿರುವ ಎಸ್‌ ಐ ಟಿ ತಂಡ, ಕುಶನೂರಿಗೆ ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next