Advertisement

ತಾಯಿಯ ಶವದ ಬಳಿ ಸಹೋದರಿಯರ ಆಟ: ಬರ್ಗರ್ ಆಸೆಗೆ ಬಾಯಿ ಬಿಟ್ಟರು ಭಯಾನಕ ಸತ್ಯ  

04:36 PM Jul 22, 2021 | Team Udayavani |

ತಮಿಳುನಾಡು: ಹತ್ಯೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಶವದ ಪಕ್ಕದಲ್ಲಿಯೇ 20ರ ಹರೆಯದ ಇಬ್ಬರು ಅಕ್ಕ-ತಂಗಿಯರು ಗೊಂಬೆಯ ಜೊತೆ ಆಟವಾಡುತ್ತ ಕುಳಿತಿದ್ದ ಘಟನೆಯೊಂದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.

Advertisement

ಗಂಡನಿಂದ ದೂರವಾಗಿದ್ದ ಉಷಾ ಹೆಸರಿನ ಹೆಣ್ಣು ಮಗಳು, ಮಾನಸಿಕ ಅಸ್ವಸ್ಥ ತನ್ನ ಎರಡು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದಳು. ಸಂಸಾರದ ಬಂಡಿ ಸಾಗಿಸಲು ಟೂಷನ್ ಹೇಳುತ್ತಿದ್ದಳು. ಇದರಿಂದ ಬಂದ ಹಣದಿಂದಲೇ ಮಕ್ಕಳನ್ನು ಸಾಕಿ-ಸಲುಹಿದ್ದಳು. ಆದರೆ ಇಂದು ಮಂಗಳವಾರ (ಜುಲೈ 20) ಹೆಣವಾಗಿದ್ದಾಳೆ.

ಎಷ್ಟೇ ಹೊತ್ತಾದರೂ ಉಷಾ ಮನೆಯ ಬಾಗಿಲು ತೆರೆಯದ್ದನ್ನು ಗಮನಿಸಿದ ನೆರೆ-ಹೊರೆಯವರು ಅನುಮಾನಗೊಂಡು ಕಿಟಕಿಗಳನ್ನು ತೆರೆದು ನೋಡಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಮಕ್ಕಳಿಬ್ಬರು ಬೊಂಬೆಯ ಜೊತೆ ಆಟವಾಡುತ್ತಿದ್ದ ದೃಶ್ಯವನ್ನು ನೋಡಿ ಗಾಬರಿಗೊಂಡಿದ್ದಾರೆ. ಕೂಡಲೇ ನೆಲ್ವಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದೀರ್ಘ ಮನವೊಲಿಕೆಯ ನಂತರ ಸಹೋದರಿಯರು ಬಾಗಿಲು ತೆರೆದ ಬಳಿಕ ಪೊಲೀಸರು ಒಳಗೆ ಪ್ರವೇಶಿಸಿ ಘಟನೆ ಕುರಿತು ಪರಿಶೀಲನೆ ನಡೆಸಿದ್ದಾರೆ. ರಕ್ತಸಿಕ್ತವಾದ ಬಟ್ಟೆಯಲ್ಲಿಯೇ ಓರ್ವ ಸಹೋದರಿ ಮತ್ತೋರ್ವಳಿಗೆ ಬಿಸ್ಕಿಟ್ ತಿನ್ನಿಸುತ್ತ ಕುಳಿತ ದೃಶ್ಯಗಳು ಪೊಲೀಸರ ಕಣ್ಣಿಗೆ ಬಿದ್ದಿವೆ.

ಕೊಲೆ ಮಾಡಿದ್ದು ಯಾರು ?

Advertisement

ಇನ್ನು ಉಷಾ ಕೊಲೆಯ ಬಗ್ಗೆ ಆಕೆಯ ಮಕ್ಕಳು ಏನನ್ನೂ ಬಾಯಿ ಬಿಡಲು ಸಿದ್ಧರಿರಲಿಲ್ಲ. ಬರ್ಗರ್ ಕೊಡಿಸುವುದಾಗಿ ಪೊಲೀಸರು ಹೇಳಿದ ಬಳಿಕ ಭಯಾನಕ ಸತ್ಯ ಬಿಚ್ಚಿದ್ದಾರೆ. ಕೋಲಿನಿಂದ ನನ್ನ ತಾಯಿಯನ್ನು ಕೊಂದಿದ್ದಾಗಿ ಓರ್ವ ಮಗಳು ಒಪ್ಪಿಕೊಂಡಿದ್ದಾಳೆ. ಅದಾಗ್ಯೂ ಕೂಡ ಸಹೋದರಿಯಬ್ಬರಿಗೂ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಹೇಳಿಕೆ ದಾಖಲು ಮಾಡಿಕೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅವರಿಬ್ಬರನ್ನು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next