ಶಿರಸಿ: ನಿಯಂತ್ರಣ ತಪ್ಫಿದ ಬೈಕ್ ರಸ್ತೆ ಬದಿಯ ದರೆಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಕುಮಟಾ ರಸ್ತೆಯ ಶಿರಸಿಮಕ್ಕಿ ಕತ್ರಿ ಬಳಿ ನಡೆದಿದೆ.
Advertisement
ಸಿದ್ದಾಪುರ ತಾಲೂಕಿನ ಹೆಗ್ಗರಣಿಯ ಬೈಕ್ ಸವಾರ ಸದಾಶಿವ ಗಣಪತಿ ಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಹಸವಾರ ಜಗದೀಶ ಗಣಪತಿ ಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿರಸಿ ನಮ್ಮ ಹಬ್ಬ ನೋಡಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.