Advertisement

ಶಿರಸಿ: ಏಳು ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ‌ ಮೆರೆದ ಚಾಲಕ, ನಿರ್ವಾಹಕ

03:12 PM Dec 29, 2022 | Team Udayavani |

ಶಿರಸಿ: ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಸುಮಾರು ಏಳು ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳಿದ್ದ ಚೀಲವನ್ನು ನಿರ್ವಾಹಕ, ಚಾಲಕರು‌ ಹಿಂತಿರುಗಿಸಿ‌ ಪ್ರಾಮಾಣಿಕತೆ‌ ಮೆರೆದ ಘಟನೆ ಶಿರಸಿಯಲ್ಲಿ‌ ನಡೆದಿದೆ.

Advertisement

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ಘಟಕದ ನಿರ್ವಾಹಕ ಚಾಲಕರ ಸೇವಾ ನಾಯಕ್ ರಾಥೋಡ್ ಹಾಗೂ ಚಾಲಕ ವಿನೋದ್ ನಾಯ್ಕ ಪ್ರಯಾಣಿಕರೊಬ್ಬರು ಬಸ್‌ ನಲ್ಲಿ ಬಿಟ್ಟು ಹೋಗಿದ್ದ ಬಂಗಾರದ ಆಭರಣಗಳಿದ್ದ ಚೀಲವನ್ನು ವಾರಸುದಾರರಾದ ಇಸಳೂರಿನ ಕವಿತಾ ಅವರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿಸಿ ತಮ್ಮ ಸೇವಾ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ವಿಭಾಗಿಯ ನಿಯಂತ್ರಾಧಿಕಾರಿ ಶ್ರೀನಿವಾಸ್ ಚಾಲಕ ನಿರ್ವಾಹಕರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next