Advertisement

Sirsi ಕರಸುಳ್ಳಿ ಕೆರೆ ಸಮರ್ಪಣೆ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್

03:15 PM May 18, 2023 | Team Udayavani |

ಶಿರಸಿ: ಜೀವ ಜಲ‌ ಕಾರ್ಯಪಡೆಯ ನೇತೃತ್ವದಲ್ಲಿ ಪುನರುಜ್ಜೀವನಗೊಂಡ ಎರಡು ಎಕರೆ ಮೂರು ಗುಂಟೆ ಕ್ಷೇತ್ರದ ತಾಲೂಕಿನ ಕರಸುಳ್ಳಿ ಕೆರೆಯ ಸಮರ್ಪಣೆಯನ್ನು ಪ್ರಸಿದ್ಧ ಚಿತ್ರ ನಟ, ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಮಫಲಕ ಅನಾವರಣಗೊಳಿಸಿ ನೆರವೇರಿಸಿದರು.

Advertisement

ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಹೇಮಾ ಹೆಬ್ಬಾರ್ ಅವರನ್ನು ಗ್ರಾಮಸ್ಥರ ಪರವಾಗಿ ಆತ್ಮೀಯವಾಗಿ ಸಮ್ಮಾನಿಸಲಾಯಿತು.

ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅಭಿನಂದನಾ ನುಡಿಗಳನ್ನು ಆಡಿದರು. ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ರಾಜು‌ ಮೊಗವೀರ, ಎಚ್.ವಿ.ಧರ್ಮೇಶ, ಯಡಹಳ್ಳಿ ಗ್ರಾ.ಪಂ.ಸದಸ್ಯ ಕೇಶವ ಹೆಗಡೆ, ಹಿರಿಯ ಸಹಕಾರಿ ದೇವರು ಭಟ್ ಕರಸುಳ್ಳಿ, ದತ್ತಾತ್ರಯ ಭಟ್ಟ, ಎಸಿ ದೇವರಾಜ್, ಅಕ್ಷತ್ ಹೆಗಡೆ,‌ ನಿವೇದಿತಾ ಹೆಬ್ಬಾರ್, ಅವನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next