Advertisement

Sirsi ರೈತನ ಮಗಳಿಗೆ ಪಿಎಚ್.ಡಿ ಜತೆ ಬಂಗಾರದ ಪದಕ

08:14 PM Jun 12, 2023 | Team Udayavani |

ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 36ನೇ ಘಟಿಕೋತ್ಸವದಲ್ಲಿ ತಾಲೂಕಿನ ಕಾನಗೋಡಿನ ಪ್ರಗತಿಪರ ರೈತ ದಂಪತಿಗಳ ಮಗಳು ಪಿಎಚ್. ಡಿ ಜತೆ ಬಂಗಾರ ಪದಕ ಪಡೆದುಕೊಂಡಿದ್ದಾರೆ.

Advertisement

ರಮೇಶ ಹೆಗಡೆ ಹಾಗೂ ರಾಧಾ ಹೆಗಡೆ ದಂಪತಿಯ ಪುತ್ರಿ ಪ್ರಿಯಾ ಹೆಗಡೆ ಅವರು ಜೋಯಿಡಾದ ಕುಣಬಿ ಜನಾಂಗ ಮತ್ತು ಅಂಕೋಲಾದ ಹಾಲಕ್ಕಿ ಜನಾಂಗದ ಆರೋಗ್ಯ ಹಾಗೂ ಪೋಷಕಾಂಶಗಳ (Health, Nutrition) ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು.ಅವರ‌ ಮಹಾ ಪ್ರಬಂಧಕ್ಕೆ ಮಾರ್ಗದರ್ಶಕರಾಗಿ ಡಾ. ವಿನೂತಾ ಉಮೇಶ ಮುಕ್ತಾಮಠ ಸಹಕಾರ ಮಾಡಿದ್ದರು. ಬಿಎಸ್ ಸಿ, ಎಂಎಸ್ಸಿ ಪದವಿ ಪಡೆದ ಪ್ರಿಯಾ ಪಿಎಚ್. ಡಿ ಪದವಿಯನ್ನುರಾಜ್ಯಪಾಲರಿಂದ ಸ್ವೀಕರಿಸಿದರು. ಇವರ ಸಹೋದರಿ ಪ್ರೀತಿ ಹೆಗಡೆ 2017-18ರಲ್ಲಿ ಎಂಎಸ್ ಸಿ ಓದುವಾಗ ಬಂಗಾರದ ಪದಕ ಕೂಡ ಪಡೆದಿದ್ದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next