Advertisement

ಶಿರಸಿ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ನಾಡಿಗೇ ಮಾದರಿಯಾಗಬೇಕು: ಸ್ಪೀಕರ್ ಕಾಗೇರಿ

09:23 PM Aug 10, 2022 | Team Udayavani |

ಶಿರಸಿ: ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಜಿಲ್ಲೆಯಲ್ಲೆ ಮೊದಲ ಬಾರಿಗೆ ತೆರೆದುಕೊಳ್ಳಲಿರುವ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರದವನ್ನು ನಾಡಿಗೇ ಮಾದರಿಯಾಗಿ ಸ್ಥಾಪನೆ ಮಾಡುವ ಕುರಿತು ಇಲಾಖೆಯ ಸಚಿವರು, ಉನ್ನತ ಅಧಿಕಾರಿಗಳ ಜೊತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದರು.

Advertisement

ಬೆಂಗಳೂರಿನ ವಿಧಾನ ಸೌಧದ ಕಚೇರಿಯಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವತ್ಥ ನಾರಾಯಣ ಹಾಗೂ ಇತರ ಅಧಿಕಾರಿಗಳ ಜೊತೆ ಕಾಗೇರಿ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಈಗಾಗಲೇ ಇರುವ ವಿಜ್ಞಾನ ಕೇಂದ್ರದ ಮಾದರಿಯ ಜೊತೆ ಇನ್ನೂ ಹೈಟೆಕ್ ಆಗಿ ನಡೆಸುವ ಬಗ್ಗೆ ಚರ್ಚೆ ನಡೆಸಿದರು. ಕೇಂದ್ರಕ್ಕೆ ಬರಲಿರುವ ತಾಂತ್ರಿಕ‌ ಉಪಕರಣಗಳನ್ನು ಇನ್ನಷ್ಟು ಆಧುನಿಕಗೊಳಿಸುವ ಕುರಿತೂ ಗಮನಿಸುವಂತೆ ಸ್ಪೀಕರ್ ಸೂಚಿಸಿದರು.

ಉದ್ದೇಶಿತ ವಿಜ್ಞಾನ ಕೇಂದ್ರಕ್ಕೆ ಈಗಾಗಲೇ ಬಜೆಟ್ ಅನುಮೋದನೆ ನೀಡಿದ್ದು, ೭ ಕೋ.ರೂ. ಮೊತ್ತದಲ್ಲಿ ಇದು ನಿರ್ಮಾಣ ಆಗಬೇಕಿದೆ. ತಾಲೂಕಿನ ಇಸಳೂರಿನಲ್ಲಿ ಸ್ಥಳ‌ ಕೂಡ ಅಂತಿಮಗೊಳಿಸಲಾಗಿದೆ. ಸ್ಪೀಕರ್ ಕಾಗೇರಿ ಅವರು ನಡೆಸಿದ ಮಹತ್ವದ ಸಭೆ ಈ ಕೇಂದ್ರದ ಆರಂಭಕ್ಕೂ‌ ಮೊದಲು ವಿಜ್ಞಾನ ವಿದ್ಯಾರ್ಥಿಗಳಲ್ಲಿ ಹೊಸ ನಿರೀಕ್ಷೆ ನಿರ್ಮಾಣ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next