Advertisement

ಗಂಗೊಳ್ಳಿ; ಮಗುಚಿದ ದೋಣಿ -ಮೀನುಗಾರರು ಪಾರು

10:30 AM Aug 03, 2021 | Team Udayavani |

ಗಂಗೊಳ್ಳಿ: ಮೀನುಗಾರಿಕೆ ಋತು ಆರಂಭವಾಗುತ್ತಿದ್ದಂತೆ ಗಂಗೊಳ್ಳಿ ಬಂದರಿನ ಅಳಿವೆ ಬಾಗಿಲ ಬಳಿ ರವಿವಾರ ದೋಣಿ ಅವಘಡ ಸಂಭವಿಸಿದ್ದು, ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.

Advertisement

ಇದನ್ನೂ ಓದಿ:ಹಾಕಿ ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾಗೆ ಸೋಲು: ಕೈತಪ್ಪಿದ ಚಿನ್ನ ಗೆಲ್ಲುವ ಅವಕಾಶ

ಜಿ. ಪ್ರಕಾಶ್‌ ಮಾಲಕತ್ವದ ಪರಾಶಕ್ತಿ ಹೆಸರಿನ ದೋಣಿಯಲ್ಲಿ ನಾಲ್ವರು ಮೀನುಗಾರರು ಬಲೆಯನ್ನು ತುಂಬಿಸಿಕೊಂಡು ಮೀನುಗಾರಿಕೆಗೆ ತೆರಳುತ್ತಿದ್ದಾಗ, ನೀರು ದೋಣಿಯೊಳಗೆ ಬಂದು ದೋಣಿ ಮಗುಚಿತು. ಬಲೆ ನೀರಿನಲ್ಲಿ ಮುಳುಗಿದೆ. ಬಳಿಕ ಎರಡು ಯಾಂತ್ರಿಕೃತ ದೋಣಿಗಳ ಸಹಾಯದಿಂದ ದೋಣಿಯನ್ನು ದಡಕ್ಕೆ ತರಲಾಗಿದೆ.

ಡ್ರೆಜ್ಜಿಂಗ್‌ಗೆ ಆಗ್ರಹ: ಅನೇಕ ವರ್ಷಗಳಿಂದ ಅಳಿವೆ ಬಾಗಿಲು ವ್ಯಾಪ್ತಿಯಲ್ಲಿ ಡ್ರೆಜ್ಜಿಂಗ್‌ ಮಾಡದೇ ಹೂಳು ತುಂಬಿಕೊಂಡಿದೆ. ಸಮಸ್ಯೆಯ ಬಗ್ಗೆ ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ. ಗಂಗೊಳ್ಳಿ ಮೀನುಗಾರಿಕಾ ಬಂದರು ಹಾಗೂ ಅಳಿವೆ ವ್ಯಾಪ್ತಿಯಲ್ಲಿ ಶೀಘ್ರ ಡ್ರೆಜ್ಜಿಂಗ್‌ ಮಾಡಿ ಹೂಳೆತ್ತಬೇಕು ಎಂದು ಗಂಗೊಳ್ಳಿಯ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next