Advertisement

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

08:46 AM Oct 17, 2021 | Team Udayavani |

ಹೊಸದಿಲ್ಲಿ: ಸಿಂಘು ಗಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಮುದಾಯದ ಮತ್ತಿಬ್ಬರು ಹರ್ಯಾಣ ಪೊಲೀಸರೆದುರು ಶರಣಾಗಿದ್ದಾರೆ. ನಿಹಾಂಗ್ ಸಮುದಾಯದ ಭಗವಂತ್ ಸಿಂಗ್ ಮತ್ತು ಗೋವಿಂದ್ ಸಿಂಗ್ ಶರಣಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

Advertisement

ನಿಹಾಂಗ್‌ ಸರಬಿತ್‌ 7 ದಿನ ಕಸ್ಟಡಿಗೆ: ಸಿಂಘು ಗಡಿಯಲ್ಲಿ ದಲಿತ ವ್ಯಕ್ತಿಯೊಬ್ಬನ ಎಡಗೈ ಕತ್ತರಿಸಿ ಅತ್ಯಂತ ಕ್ರೂರವಾಗಿ ಕೊಲೆಗೈದ ಪ್ರಕರಣದ ಆರೋಪಿ ನಿಹಾಂಗ್‌ ಸಿಖ್‌ ಸರಬ್ಜಿತ್‌ನನ್ನು ಶನಿವಾರ ಸ್ಥಳೀಯ ನ್ಯಾಯಾಲಯವು 7 ದಿನಗಳ ಕಾಲ ಪೊಲೀಸ್‌ ವಶಕ್ಕೊಪ್ಪಿಸಿದೆ. ಜತೆಗೆ, ಪ್ರಕರಣ ಸಂಬಂಧ ನಾರಾಯಣ ಸಿಂಗ್‌ ಎಂಬಾತನನ್ನೂ ಬಂಧಿಸಲಾಗಿದೆ.

ಇನ್ನೂ ನಾಲ್ವರು ಆರೋಪಿಗಳ ಬಗ್ಗೆ ಸರಬ್ಜಿತ್‌ ಮಾಹಿತಿ ನೀಡಿದ್ದು, ಅವರನ್ನು ವಶಕ್ಕೆ ಪಡೆಯಲು ನಾವು ಈತನನ್ನು ಪಂಜಾಬ್‌ನ ಗುರುದಾಸ್ಪುರಕ್ಕೆ ಕರೆದೊಯ್ಯಬೇಕಾಗುತ್ತದೆ. ಅಲ್ಲದೇ, ಲಖ್‌ಬೀರ್‌ ಸಿಂಗ್‌ ಕೊಲೆಗೆ ಬಳಸಲಾದ ಕತ್ತಿಯೂ ಸಿಕ್ಕಿದ್ದು, ಸರಬ್ಜಿತ್‌ನನ್ನು 14 ದಿನಗಳ ಕಾಲ ವಶಕ್ಕೆ ನೀಡುವಂತೆ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಕೊನೆಗೆ ಕೋರ್ಟ್‌ 7 ದಿನಗಳ ಕಾಲ ವಶಕ್ಕೆ ನೀಡಿ ಆದೇಶ ಹೊರಡಿಸಿತು.

ಇದೇ ವೇಳೆ ಶನಿವಾರ ಮಾತನಾಡಿರುವ ಲಖ್‌ಬೀರ್‌ ಅವರ ಸೋದರಿ ರಾಜ್‌ ಕೌರ್‌, “ಲಖ್‌ಬೀರ್‌ ನನ್ನಿಂದ 50 ರೂ. ಪಡೆದು ಛಾಬಾಲ್‌ನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದ. 7 ದಿನಗಳಲ್ಲಿ ವಾಪಸ್‌ ಬರುವುದಾಗಿಯೂ ತಿಳಿಸಿದ್ದ. ಅವನು ಗುರು ಗ್ರಂಥ ಸಾಹಿಬ್‌ ಅನ್ನು ವಿರೂಪಗೊಳಿಸುವಂಥ ವ್ಯಕ್ತಿಯಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next