Advertisement

ಎ.1ರಿಂದ ಸರಳೀಕೃತ ರಿಟರ್ನ್ಸ್ ನಮೂನೆ ಬಳಕೆ ಜಾರಿ

10:08 AM Dec 25, 2019 | Team Udayavani |

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಸರಳೀಕೃತ ರಿಟರ್ನ್ಸ್ ನಮೂನೆಗಳು (ಸಹಜ್‌, ಸುಗಮ್‌, ನಾರ್ಮಲ್‌) ಬಳಕೆ ವ್ಯವಸ್ಥೆ ಮುಂದಿನ ಎ.1ರಿಂದ ಜಾರಿಯಾಗಲಿದೆ. ಎ.1ರಿಂದ 100 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ವ್ಯಾಪಾರಿಗಳು, ಉದ್ಯಮಿಗಳಿಗೆ “ಎಲೆಕ್ಟ್ರಾನಿಕ್‌- ಇನ್‌ವಾಯ್ಸ’ ವ್ಯವಸ್ಥೆ ಐಚ್ಛಿಕ ಮತ್ತು ಪ್ರಯೋಗಾರ್ಥ ಅಳವಡಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಜಿಎಸ್‌ಟಿ ನೆಟ್‌ವರ್ಕ್‌ ಸಚಿವರ ತಂಡದ ಮುಖ್ಯಸ್ಥ, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಹೇಳಿದರು.

Advertisement

ಸೋಮವಾರ ಇಲ್ಲಿ ನಡೆದ ಜಿಎಸ್‌ಟಿ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರಿಗಳ ಅನುಕೂಲಕ್ಕಾಗಿ ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಪ್ರಯತ್ನ ನಡೆದಿದೆ. ಅದಕ್ಕೆ ಪೂರಕವಾಗಿ ಸಹಜ್‌, ಸುಗಮ್‌, ನಾರ್ಮಲ್‌ ರಿಟರ್ನ್ಸ್ ನಮೂನೆ ಬಳಕೆ ಎ.1ರಿಂದ ಜಾರಿಯಾಗಲಿದೆ.

ಹೊಸ ವ್ಯವಸ್ಥೆ ಅಳವಡಿಕೆ ಬಗ್ಗೆ ಈಗಾಗಲೇ ಒಂದು ಲಕ್ಷ ಮಂದಿ ವ್ಯಾಪಾರ- ವ್ಯವಹಾರಸ್ಥರಿಗೆ ಜಾಗೃತಿ ಮೂಡಿಸಲಾಗಿದ್ದು, ಮಾರ್ಚ್‌ ವೇಳೆಗೆ 10 ಲಕ್ಷ ಮಂದಿಗೆ ಅರಿವು ಮೂಡಿಸುವ ಉದ್ದೇಶವಿದೆ. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಸುಗಮಗೊಳಿಸಲು ಪೂರಕವಾಗಿ 600 ಸಲಹೆಗಳನ್ನು ಸ್ವೀಕರಿಸಲಾಗಿದೆ.

ಇ- ಇನ್‌ವಾಯ್ಸ
ನೂತನ ಇ- ಇನ್‌ವಾಯ್ಸ ವ್ಯವಸ್ಥೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತಿದೆ. ವಾರ್ಷಿಕ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರು ಜ.1ರಿಂದ ಇ-ಇನ್‌ವಾಯ್ಸ ವ್ಯವಸ್ಥೆಯನ್ನು ಐಚ್ಛಿಕ ಮತ್ತು ಪ್ರಯೋಗಾರ್ಥ ಜಾರಿ ಮಾಡಬಹುದು. ಈ ವ್ಯವಸ್ಥೆಯಿಂದ ಮಾಸಿಕ 3ಬಿ ರಿಟರ್ನ್ಸ್ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.

ಆಧಾರ್‌ ಕಡ್ಡಾಯ
ನಕಲಿ ಇನ್‌ವಾಯ್ಸ ಸೃಷ್ಟಿಸಿ ವಂಚಿಸುವುದನ್ನು ತಪ್ಪಿಸಲು ಆಧಾರ್‌ ಜೋಡಣೆ ಕಡ್ಡಾಯಗೊಳಿಸಲಾಗುತ್ತಿದೆ. ಜ. 1ರಿಂದ ಆಧಾರ್‌ ಜೋಡಣೆ ವ್ಯವಸ್ಥೆ ಜಾರಿಯಾಗಲಿದೆ. ಹೊಸದಾಗಿ ಜಿಎಸ್‌ಟಿ ನೋಂದಣಿ ಪಡೆಯುವವರು ಆಧಾರ್‌ ವಿವರ ಸಲ್ಲಿಸುವುದು ಕಡ್ಡಾಯ ಎಂದರು.

Advertisement

ಕೇಂದ್ರ ಸರಕಾರವು ರಾಜ್ಯಕ್ಕೆ ಅಕ್ಟೋಬರ್‌, ನವೆಂಬರ್‌ ತಿಂಗಳ ಜಿಎಸ್‌ಟಿ ಪರಿಹಾರ ಮೊತ್ತವನ್ನಷ್ಟೇ ಪಾವತಿಸಬೇಕಿದ್ದು, ಮಾಸಾಂತ್ಯದೊಳಗೆ ಬಾಕಿ ಪರಿಹಾರವು ಬಿಡುಗಡೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next