Advertisement

“ಸರಳ ಕಲ್ಪನೆಗಳ ಅಭ್ಯಸಿಸಿ ಸಂಶೋಧನ ವಿಷಯವನ್ನಾಗಿಸಿ’

12:43 PM Apr 01, 2017 | |

ನೆಹರೂನಗರ : ಸರಳ ಕಲ್ಪನೆಗಳನ್ನು ಸರಿಯಾದ ರೀತಿಯಲ್ಲಿ ಅಭ್ಯಸಿಸಿ ಅದನ್ನೊಂದು ಸಂಶೋಧನ ವಿಷಯವನ್ನಾಗಿಸಿದರೆ ಸರಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಸಾಧ್ಯವಿದೆ ಎಂದು ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರೊಫೆ ಸರ್‌ ಡಾ| ರೋಶನ್‌ ಜಾಯ್‌ ಮಾರ್ಟಿಸ್‌ ಅವರು ಹೇಳಿದರು.

Advertisement

ಇಲ್ಲಿನ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ವಿಭಾಗದ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಸನ್ನಿವೇಶಕ್ಕೆ ಹೊಂದಿಕೆಯಾಗುವ ಮೆಕೆಟ್ರಾನಿಕ್ಸ್‌, ನ್ಯಾನೋ ಟೆಕ್ನಾಲಜಿ ಮೊದಲಾದ ವಿಷಯಗಳಲ್ಲಿ ಸಂಶೋಧ ನೆಗೆ ವಿಪುಲ ಅವಕಾಶಗಳಿವೆ. ನಿರ್ದಿಷ್ಟ ವಾದ ಮಾನದಂಡಗಳೊಂದಿಗೆ ಸಲ್ಲಿಸುವ ಪ್ರಸ್ತಾವನೆಗಳಿಗೆ ಕೇಂದ್ರ, ರಾಜ್ಯ ಸರಕಾರದ ಅನುದಾನ ಸಿಗುತ್ತದೆ ಎಂದರು.

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬಯೋಟೆಕ್ನಾಲಜಿ ವಿಭಾಗ, ಅಖೀಲ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ, ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಗಳು ವಿವಿಧ ವಿಭಾಗಗಳಲ್ಲಿ ಅನುದಾನವನ್ನು ನೀಡುತ್ತವೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಎಸ್‌. ಗೋವಿಂದೇಗೌಡ, ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಡಾ| ಸಂದೀಪ್‌ ನಾಯಕ್‌, ಇಲೆಕ್ಟ್ರಾನಿಕ್ಸ್‌ ವಿಭಾಗ ಮುಖ್ಯಸ್ಥ ಪ್ರೊ| ಶ್ರಿಕಾಂತ್‌ ರಾವ್‌ ಉಪಸ್ಥಿತರಿದ್ದರು.ಪ್ರೊ| ಶ್ರೀಕಾಂತ್‌ ರಾವ್‌ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕಿ ಪ್ರೊ| ಸಂಗೀತಾ ಬಿ.ಎಲ್‌. ನಿರೂಪಿಸಿದರು. ಎಲೆಕ್ಟ್ರಾನಿಕ್ಸ್‌,   ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಉಪನ್ಯಾಸಕರು ಪಾಲ್ಗೊಂಡಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next