Advertisement

ದೊಡ್ಡವರ ಸಣ್ಣ ಮಾತಿಗೆ ಮೌನವೇ ಉತ್ತರ: ಸಚಿವ ಕೋಟ

12:37 AM Apr 12, 2022 | Team Udayavani |

ಉಡುಪಿ: ದೊಡ್ಡರ ಸಣ್ಣತನದ ಮಾತಿಗೆ ಮೌನವೇ ಉತ್ತರ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗೆ ಮೌನವಾಗಿರುವುದೇ ಉತ್ತರ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಆದಿಉಡುಪಿ ಹೆಲಿಪ್ಯಾಡ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಗಾಗ್ಗೆ ವಾಗ್ಧಾಳಿ ನಡೆಸುವುದು ಸಹಜ. ವಾದ, ಆರ್ಭಟದಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ವಾಸ್ತವಿಕ ವಿಚಾರದ ನೆಲೆಗಟ್ಟಿನಲ್ಲಿ ಉತ್ತಮ, ಸಮರ್ಥ ಆಡಳಿತದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಗುಡುಗು, ಸಿಡಿಲು ಮಿಂಚು ಸಹಜ. ಜನ ಸರಕಾರದ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಸಮರ್ಥರಾಗಿದ್ದಾರೆ ಎಂದರು.

ದೊಡ್ಡವರು ಆಡುವ ಸಣ್ಣ ಮಾತಿಗೆ ಉತ್ತರ ಇರುವುದಿಲ್ಲ. ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ, ವಿಪಕ್ಷದ ನಾಯಕರಾಗಿದ್ದಾರೆ. ಅವರು ರಾಜಕಾರಣದಲ್ಲಿ ತುಂಬ ದೊಡ್ಡವರು ಎಂದುಕೊಂಡಿದ್ದೇನೆ. ಅವರಾಡುವ ಸಣ್ಣ ಮಾತಿಗೆ ಮುಖ್ಯಮಂತ್ರಿಗಳ ಮೌನವೇ ಅರ್ಥಗರ್ಭಿತ ಎಂದರು.

ಹಿಜಾಬ್‌ ತೀರ್ಪಿನ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರಲ್ಲಿ ಅಭಿಪ್ರಾಯ ಭೇದವಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಆದರೆ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಡಿ ಎನ್ನಲು ಯಾರಿಂದಲೂ ಆಗದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next