Advertisement

ಮೂವರು ಸಹೋದ್ಯೋಗಿಗಳನ್ನೇ ಗುಂಡಿಟ್ಟು ಕೊಂದ ಪೊಲೀಸ್‌ ಅಧಿಕಾರಿ

07:23 PM Jul 18, 2022 | Team Udayavani |

ನವದೆಹಲಿ: ಪತ್ನಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಕೊಟ್ಟರೆಂಬ ಕಾರಣಕ್ಕೆ ಪೊಲೀಸ್‌ ಅಧಿಕಾರಿಯೊಬ್ಬರು ಮೂವರು ಸಹೋದ್ಯೋಗಿಗಳನ್ನೇ ಗುಂಡಿಟ್ಟು ಕೊಂದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

Advertisement

ನಗರದ ಹೈದರ್‌ಪುರ ನೀರು ಸಂಸ್ಕರಣಾ ಘಟಕದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಸ್ಥಳದಲ್ಲಿ ಸಿಕ್ಕಿಂ ಪೊಲೀಸ್‌ ಇಲಾಖೆಯ ಅಧಿಕಾರಿಗಳನ್ನು ಕಾವಲಿಗೆಂದು ನಿಯೋಜಿಸಲಾಗಿತ್ತು.

ಅದರಲ್ಲಿ ಪ್ರಬಿನ್‌ ರೈ(32) ಹೆಸರಿನ ಅಧಿಕಾರಿಯ ಪತ್ನಿಯ ಬಗ್ಗೆ ಸಹೋದ್ಯೋಗಿಗಳು ಕಾಮೆಂಟ್‌ ಮಾಡಿದ್ದಾರೆ. ಆ ಹಿನ್ನೆಲೆ ಅವರು ಕಮಾಂಡರ್‌ ಪಿಂಟೋ ಭೂಟಿಯಾ, ಪೇದೆಗಳಾದ ಇಂದ್ರ ಲಾಲ್‌ ಛೆತ್ರಿ ಮತ್ತು ಧನ್ಹಾಗ್‌ ಸುಬ್ಬ ಅವರಿಗೆ ಗುಂಡು ಹಾರಿಸಿದ್ದಾರೆ. ನಂತರ ತಾವೇ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next