Advertisement
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಪ್ರತಿನಿಧಿಸಿದ್ದ ವರುಣಾ ಕ್ಷೇತ್ರ ವ್ಯಾಪ್ತಿಗೆ ಬರುವ ತಗಡೂರು ಗ್ರಾಮದ ವಯಯೋವೃದ್ಧ ಮಹದೇವೇಗೌಡ ಅವರ ಕುಟುಂಬ ದೇವರರಿಗೆ ಬಿಟ್ಟ ಬಸವನನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿತ್ತು. ಕೌಟುಂಬಿಕ ಕಾರಣಕ್ಕೆ ಮಾವ ಮತ್ತು ಅಳಿಯನ ನಡುವೆ ಜಗಳವಾಗಿದೆ.
Related Articles
Advertisement
ಎರಡು ತಿಂಗಳ ಹಿಂದೆ ಸಾಮಾಜಿಕ ಬಹಿಷ್ಕಾರ ಹಾಕಿ, ನೀವು ಮಾಡಿದ್ದು ತಪ್ಪು ಎಂದು ದಂಡ ಕಟ್ಟಿಸಿಕೊಂಡ ನಂತರವೂ ಬಹಿಷ್ಕಾರ ಹಿಂಪಡೆಯದೆ ದೌರ್ಜನ್ಯ ನಡೆಸುತ್ತಿರುವುದರಿಂದ ಕೂಲಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಈ ಕುಟುಂಬ ಇದೀಗ ಬೀದಿಗೆ ಬೀಳುವಂತಾಗಿದೆ. ಗ್ರಾಮದ ಯಜಮಾನರ ಈ ದೌರ್ಜನ್ಯದಿಂದ ನಮಗೆ ನ್ಯಾಯ ಕೊಡಿಸಿ ಎಂದು ಈ ಬಡ ಕುಟುಂಬ ಇದೀಗ ಕಚೇರಿಗಳನ್ನು ಅಲೆಯುವಂತಾಗಿದೆ.
15 ವರ್ಷಗಳಿಂದ ನಮ್ಮೂರ ದೇವರ ಬಸವನನ್ನು ಮೇಯಿಸುತ್ತಿದ್ದು, ನೀವು ಜಗಳ ಆಡುತ್ತೀರಿ ಎಂದು ಹೇಳಿ ನಮ್ಮಿಂದ ಬಸವನನ್ನು ಕಿತ್ತುಕೊಂಡಿದ್ದಾರೆ. ಗ್ರಾಮದ ದೇವಸ್ಥಾನಕ್ಕೆ ಹೋಗುವಂತಿಲ್ಲ, ನಲ್ಲಿಯಲ್ಲಿ ನೀರು ಹಿಡಿಯದಂತೆ ಬಹಿಷ್ಕಾರ ಹಾಕಿದ್ದಾರೆ. ನಮ್ಮಿಂದ 10 ಸಾವಿರ ರೂ. ದಂಡ ಕಟ್ಟಿಸಿಕೊಂಡರೂ ಬಹಿಷ್ಕಾರ ವಾಪಸ್ ತೆಗೆದುಕೊಂಡಿಲ್ಲ.-ದೊಡ್ಡಮ್ಮ, ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಮಹಿಳೆ ಕುಟುಂಬಸ್ಥರು ಮನವಿ ಕೊಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ರಾಜಸ್ವ ನಿರೀಕ್ಷಕರನ್ನು ಕಳುಹಿಸಿ ವಸ್ತು ಸ್ಥಿತಿ ಏನೆಂದು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಲಾಗಿದ್ದು, ಆ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗುವುದು.
-ಬಾಲಸುಬ್ರಹ್ಮಣ್ಯ, ಉಪ ತಹಶೀಲ್ದಾರ್, ನಂಜನಗೂಡು