Advertisement

ಸಮಿತಿಯಿಂದ ಸಿಧು ಔಟ್‌

12:24 AM Jun 09, 2019 | Team Udayavani |

ಚಂಡೀಗಢ: ಪಂಜಾಬ್‌ನಲ್ಲಿ ಸಿಎಂ ಅಮರಿಂದರ್‌ ಸಿಂಗ್‌ ಹಾಗೂ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಮಧ್ಯದ ತಿಕ್ಕಾಟ ಮುಂದುವರಿದಿದ್ದು, ಶನಿವಾರ ರಚಿಸಿದ 8 ಸಲಹಾ ಸಮಿತಿಗಳಲ್ಲಿ ಸಿಧುಗೆ ಯಾವ ಸಮಿತಿಯಲ್ಲೂ ಸದಸ್ಯತ್ವ ನೀಡಿಲ್ಲ. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಈ ಸಲಹಾ ಸಮಿತಿ ಸರಕಾರಕ್ಕೆ ವರದಿ ನೀಡಲಿದೆ.

Advertisement

ಸರಕಾರ ತಂದಿರುವ ಜನಪರ ಯೋಜನೆಗಳ ಅನುಷ್ಠಾನ ಮತ್ತು ಬದಲಾವಣೆ ಕುರಿತ ವರದಿಯನ್ನು ನೀಡಲಿದ್ದು, ಹಲವು ಶಾಸಕರು ಮತ್ತು ಸಚಿವರು ವಿವಿಧ ಸಮಿತಿಗಳಲ್ಲಿ ಸದಸ್ಯ ರಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಸಂಪುಟ ಪುನಾರಚನೆ ಮಾಡಿದಾಗ ಸ್ಥಳೀಯಾಡಳಿತ ಹುದ್ದೆಯಿಂದ ಸಿಧುಗೆ ವಿದ್ಯುತ್‌, ನವೀಕರಿಸಬಹುದಾದ ಇಂಧನ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಗ್ಗೆ ಅಸಮಾಧಾನ ಹೊಂದಿರುವ ಸಿಧು ಇನ್ನೂ ಅಧಿಕಾರ ಸ್ವೀಕರಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next