Advertisement

ಜೈಲಿನಿಂದ ತಪ್ಪಿಸಿಕೊಂಡಿದ್ದ ಸಿದ್ದು ಮುಸೇವಾಲಾ ಹತ್ಯೆ ಆರೋಪಿ ಟಿನು ಕೊನೆಗೂ ಅರೆಸ್ಟ್

11:07 AM Oct 20, 2022 | Team Udayavani |

ನವದೆಹಲಿ : ಪಂಜಾಬ್ ಗಾಯಕ ಸಿದ್ದು ಮುಸೇವಾಲಾ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ದೀಪಕ್ ಕುಮಾರ್ ಅಲಿಯಾಸ್ ಟಿನು ನನ್ನು ವಿಶೇಷ ದಳದ ಪೊಲೀಸರು ಬಂಧಿಸಿದ್ದಾರೆ.

Advertisement

ಪಂಜಾಬ್ ಪೊಲೀಸರಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕುಖ್ಯಾತ ದರೋಡೆಕೋರ ದೀಪಕ್ ನನ್ನು ವಿಶೇಷ ದಳದ ಪೊಲೀಸರ ತಂಡವು ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕುಖ್ಯಾತ ಗ್ಯಾಂಗ್‌ಸ್ಟರ್ ದೀಪಕ್ ಕುಮಾರ್ ಅಲಿಯಾಸ್ ಟಿನು ಹರಿಯಾಣ 11 ವರ್ಷಗಳ ಹಿಂದೆ ಅಪರಾಧ ಜಗತ್ತಿಗೆ ಪ್ರವೇಶಿಸಿದ್ದ ಎಂದಿದ್ದಾರೆ ಪೊಲೀಸರು. ಟಿನು ಹರಿಯಾಣ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿಯಲ್ಲಿ ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ 32 ಪ್ರಕರಣಗಳು ದಾಖಲಾಗಿವೆ.

ಅಲ್ಲದೆ ದೀಪಕ್ ಈ ಹಿಂದೆಯೂ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ : ವಿಡಿಯೋ: ಪೊಲೀಸ್ ಅಧಿಕಾರಿಯ ನಿರ್ಲಕ್ಷ್ಯದಿಂದ ಹಾರಿದ ಗುಂಡು.. ಮೊಬೈಲ್ ಶಾಪ್ ಸಿಬ್ಬಂದಿ ಗಂಭೀರ

Advertisement
Advertisement

Udayavani is now on Telegram. Click here to join our channel and stay updated with the latest news.

Next