Advertisement

ಸಿಂಗರ್ ಸಿಧು ಮೂಸೆವಾಲಾ ಹತ್ಯೆ ಮಾಡಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಂಕಿತ್ ಸಿರ್ಸಾ ಬಂಧನ

01:08 PM Jul 04, 2022 | Team Udayavani |

ಹೊಸದಿಲ್ಲಿ: ಗಾಯಕ- ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಅಂಕಿತ್ ಸಿರ್ಸಾನನ್ನು ಪೊಲೀಸರು ಬಂಧಿಸಿದ್ದಾರೆ. ಮೇ.29ರಂದು ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕಿತ್ ಸಿರ್ಸಾ ಮತ್ತು ಸಹಚರರನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.

Advertisement

ವಿಶೇಷ ತಂಡವು ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ ಮೈತ್ರಿಯ ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಗಳನ್ನು ಬಂಧಿಸಿದೆ.

ಬಂಧಿತ ಅಂಕಿತ್ ಸಿರ್ಸಾನು ಪಂಜಾಬಿ ಸಿಂಗರ್ ಸಿಧು ಮೂಸೆವಾಲಾನ ಹತ್ಯೆ ಮಾಡಿದ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೆ ಈತನ ಮೇಲೆ ಎರಡು ಹತ್ಯೆ ಯತ್ನ ಪ್ರಕರಣಗಳಿವೆ.

ಇನ್ನೋರ್ವ ಬಂಧಿತ ಆರೋಪಿ ಸಚಿನ್ ಭಿವಾನಿಯು ನಾಲ್ಕು ಮಂದಿ ಶೂಟರ್ ಗಳಿಗೆ ಆಶ್ರಯ ನೀಡಿದ ಆರೋಪ ಎದರುರಿಸುತ್ತಿದ್ದಾನೆ.

ಇದನ್ನೂ ಓದಿ:600 ರೂ. ಬಟ್ಟೆಗಾಗಿ 1.36 ಲಕ್ಷ ಕಳೆದುಕೊಂಡ ಮಹಿಳೆ: ಆಗಿದ್ದೇನು ?

Advertisement

ಅಂಕಿತ್ ಸಿರ್ಸಾ ನು ಸಿಧು ಮೂಸೆವಾಲ ಅವರಿಗೆ ಸಮೀಪದಿಂದ ಶೂಟ್ ಮಾಡಿದ್ದ. ಕಾರಿನಲ್ಲಿ ಪ್ರಿಯವ್ರತ್ ಫೌಜಿ ಕೂಡಾ ಜೊತೆಗಿದ್ದ. ಅಂಕಿತ್ ಸಿರ್ಸಾ ಕಾರು ಮೂಸೆವಾಲಾ ಅವರ ವಾಹನವನ್ನು ಅಡ್ಡಗಟ್ಟಿ ದಾರಿ ತಪ್ಪಿಸಿತ್ತು. ಬಳಿಕ ಕ್ಲೋಸ್ ರೇಂಜ್ ನಿಂದ ಮೂಸೆವಾಲಾಗೆ ಗುಂಡು ಹಾರಿಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಿಯವ್ರತ್ ಫೌಜಿ ಗ್ಯಾಂಗ್ ನ ‘ಬೊಲೆರೊ ಮಾಡ್ಯೂಲ್‘ ಮುಖ್ಯಸ್ಥನಾಗಿದ್ದ.

ಮೇ.29 ರಂದು ಪಂಜಾಬ್ ನ ಮನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾರನ್ನು ಹತ್ಯೆ ಮಾಡಲಾಗಿತ್ತು. ಜೀಪ್ ನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ತಂಡ ಮನಸೋ ಇಚ್ಛೆ ಗುಂಡು ಹಾರಿಸಿತ್ತು. ಸಿಧು ಜೊತೆಗಿದ್ದ ಸೋದರ ಸಂಬಂಧಿ ಮತ್ತು ಸ್ನೇಹಿತನೂ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next