Advertisement

ಸಿದ್ದು ಸಂಪುಟ ಸಂಪೂರ್ಣ: 24 ಮಂದಿಯಿಂದ ಇಂದು ಪ್ರಮಾಣ

12:28 AM May 27, 2023 | Team Udayavani |

ಬೆಂಗಳೂರು: ಎರಡು ದಿನ ನಡೆದ ಕಸರತ್ತಿನ ಬಳಿಕ ಕೊನೆಗೂ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಶನಿವಾರ 24 ಮಂದಿಯ ಸೇರ್ಪಡೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ.

Advertisement

ರಾಜಭವನದಲ್ಲಿ ಶನಿವಾರ ಬೆಳಗ್ಗೆ 11.30ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹೊÉàಟ್‌ ಪ್ರಮಾಣ ಬೋಧಿಸಲಿದ್ದಾರೆ.

ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಟಾಳ್ಕರ್‌, ದಿನೇಶ್‌ ಗುಂಡೂ ರಾವ್‌, ಭಟ್ಕ ಳದ ಮಾಂಕಾಳ ವೈದ್ಯ ಸಹಿತ 24 ಮಂದಿ ಸಚಿವ ಸ್ಥಾನಕ್ಕೆ ಆಯ್ಕೆ ಯಾಗಿ ದ್ದಾರೆ. ಅಚ್ಚರಿಯ ಆಯ್ಕೆ ಯಲ್ಲಿ ಯಾವುದೇ ಸದನದ ಸದಸ್ಯ ರಾಗಿರದ ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌. ಬೋಸ ರಾಜು ಸಚಿವ ರಾಗಲಿದ್ದಾರೆ.

ನಿರಾಸೆ
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಿರಿಯ ಶಾಸಕರಾದ ಆರ್‌.ವಿ. ದೇಶಪಾಂಡೆ, ಟಿ.ಬಿ. ಜಯ ಚಂದ್ರ, ಲಕ್ಷ್ಮಣ ಸವದಿ, ಬಸವ ರಾಜ ರಾಯರೆಡ್ಡಿ, ವಿನಯ ಕುಲಕರ್ಣಿ, ಮಳವಳ್ಳಿಯ ಪಿ.ಎಂ. ನರೇಂದ್ರಸ್ವಾಮಿ ಸೇರಿದಂತೆ 15ಕ್ಕೂ ಹೆಚ್ಚು ಮಂದಿಗೆ ನಿರಾಸೆಯಾಗಿದೆ.

ಹಗ್ಗ ಜಗ್ಗಾಟ
ಸಂಪುಟಕ್ಕೆ ಯಾರ್ಯಾರನ್ನು ಸೇರಿಸಿಕೊಳ್ಳಬೇಕೆಂಬುದರ ಬಗ್ಗೆ ಸಿಎಂ- ಡಿಸಿಎಂ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆದಿದೆ. ಜಿಲ್ಲೆ, ಜಾತಿ, ಪ್ರಾದೇಶಿಕ ಹಾಗೂ ಸಾಮಾಜಿಕ ನ್ಯಾಯ ಪಾಲನೆ ದೃಷ್ಟಿಯಿಂದ ಪಕ್ಷದ ಹೈಕಮಾಂಡ್‌ ಹಲವು ಸಲಹೆ ಸೂಚನೆಗಳನ್ನು ನೀಡಿದ್ದರೂ ತಮ್ಮ ಆಪ್ತರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕೆಂದು ಇಬ್ಬರೂ ಪೈಪೋಟಿ ನಡೆಸಿದ್ದು ಎರಡು ದಿನಗಳ ವಿಳಂಬಕ್ಕೆ ಕಾರಣವೆಂದು ಪಕ್ಷದ ಮೂಲಗಳು ತಿಳಿಸಿವೆ.
ಒಂದೇ ಜಿಲ್ಲೆಯಲ್ಲಿ ಒಂದೇ ಜಾತಿಯ ಇಬ್ಬರಿಗೆ ಅವಕಾಶ ಸೂಕ್ತವಲ್ಲವೆಂಬುದು ಪಕ್ಷದ ಅಭಿ ಪ್ರಾಯವಾಗಿದ್ದರೂ ಹಲವು ಕಾರಣಗಳಿಂದ ಹಾಗೂ ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಂದೇ ಜಾತಿಗೆ ಸೇರಿದ ಇಬ್ಬರಿಗೆ ಅವಕಾಶ ಕೊಡುವುದರಲ್ಲಿ ತಪ್ಪಿಲ್ಲವೆಂದು ಸಮರ್ಥಿಸಿಕೊಂಡ ಪರಿಣಾಮ ಕೆಲವು ಕಡೆ ಈ ಲೆಕ್ಕಾಚಾರ ನಡೆದಿದೆ.

Advertisement

ಸಚಿವ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನ ಗೊಂಡಿರುವ ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಶನಿವಾರವೇ ವಿಧಾನ ಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. “ನಮ,¾ ಸೇವೆ ಬೇಡವೆಂದಾದರೆ ನಮ್ಮನ್ನು ಬಿಟ್ಟುಕಳಿಸಿ’ ಎಂದು ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುಜೇìವಾಲಾ ಅವರಿಗೆ ನೇರವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೂಂದೆಡೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿ ತಾನು ಅಥಣಿ ಕ್ಷೇತ್ರದಿಂದ ಗೆದ್ದಿದ್ದಲ್ಲದೇ ಪಕ್ಕದ ಕುಡಚಿ, ಕಾಗವಾಡ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಿಸಿಕೊಂಡು ಬಂದಿದ್ದ ಲಕ್ಷ್ಮಣ ಸವದಿ ಅವರಿಗೂ ಸಚಿವ ಸ್ಥಾನ ಕೈ ತಪ್ಪಿದೆ.

ಕರಾವಳಿಗಿಲ್ಲ ಸಚಿವ ಸ್ಥಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ದಲ್ಲಿ ಕರಾವಳಿಯ ಒಬ್ಬರೂ ಸ್ಥಾನ ಪಡೆದುಕೊಂಡಿಲ್ಲ. ಶಾಸಕ ಯು.ಟಿ. ಖಾದರ್‌ ಈಗಾಗಲೇ ವಿಧಾನಸಭಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮೇಲ್ಮನೆ ಸದಸ್ಯರಾಗಿರುವ ಬಿ.ಕೆ. ಹರಿಪ್ರಸಾದ್‌, ಮಂಜುನಾಥ ಭಂಡಾರಿ ಅಥವಾ ಕೆ. ಹರೀಶ್‌ಕುಮಾರ್‌ ಅವರಿಗೆ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದ್ದರೂ ಹುಸಿಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next