Advertisement

ಸರ್ಕಾರ ಬೀಳಿಸಲು ಸಿದ್ದು ಟೈಮ್‌ ಫಿಕ್ಸ್‌: ಅಶೋಕ

11:21 PM Apr 21, 2019 | Team Udayavani |

ಬೀದರ: ಲೋಕಸಭೆ ಚುನಾವಣೆ ನಂತರ ಸಮಿಶ್ರ ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಟೈಮ್‌ ಫಿಕ್ಸ್‌ ಮಾಡಿಕೊಂಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ ಹೇಳಿದರು.

Advertisement

ನಗರದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಮತಯಾಚನೆ ನಿಮಿತ್ತ ರೋಡ್‌ ಶೋ ನಡೆಸಿ ಮಾತಾನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಹೆಚ್ಚಿದ್ದು, ಸಿದ್ದರಾಮಯ್ಯ ಅವರು ಇದೀಗ ಸರ್ಕಾರ ಬೀಳಿಸಲು ಟೈಮ್‌ ಫಿಕ್ಸ್‌ ಮಾಡಿದ್ದಾರೆ ಎಂದರು.

ಪ್ರಚಾರ ಪಡೆಯಲು ಹೇಳಿಕೆ: “ಆರ್‌.ಅಶೋಕ ಅವರಿಗೆ ಪ್ರಚಾರ ಬೇಕು. ಪತ್ರಿಕೆಗಳಲ್ಲಿ ಸುದ್ದಿ ಬರಬೇಕು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ ಉರುಳಿಸಲು ಟೈಮ್‌ ಫಿಕ್ಸ್‌ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ” ಪ್ರಚಾರ ಪ್ರಿಯ ಅಶೋಕ್‌ ನಿರಾಧಾರ ಹೇಳಿಕೆ ನೀಡುತ್ತಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿದೆ. ಚುನಾವಣೆ ನಂತರ ಕೂಡ ಮೈತ್ರಿ ಸರ್ಕಾರ ಮುಂದುವರಿಯುತ್ತದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next