Advertisement

“ಪ್ರಚಾರಕ್ಕಾಗಿ ಸಿದ್ದು ಏನೇನೋ ಹೇಳುತ್ತಾರೆ’

11:26 PM Jan 13, 2020 | Lakshmi GovindaRaj |

ಬಾಗಲಕೋಟೆ: ಸಿದ್ದರಾಮಯ್ಯ ಈಗ ಖಾಲಿ ಕೂತಿದ್ದಾರೆ. ಜನ ನಮ್ಮನ್ನು ಮರೆಯಬಾರದು ಎಂಬ ಕಾರಣಕ್ಕಾಗಿ ಮಾಧ್ಯಮದಲ್ಲಿ ಬರಬೇಕೆಂದು ಏನೇನೊ ಹೇಳುತ್ತಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಟೀಕಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಆದೇಶಗಳು ಬಾಯಿಂದ ಇರುವುದಿಲ್ಲ. ಕಪ್ಪು-ಬಿಳುಪಿನಲ್ಲಿ ಇರುತ್ತವೆ. ಅದನ್ನು ಓದಬಹುದು. ಸಿದ್ದರಾಮಯ್ಯ ಅವರು ಸರ್ಕಾರದ ಆದೇಶ, ಪ್ರೊಸಿಡಿಂಗ್ಸ್‌ ಕಾಫಿ ಓದಲಿ.

Advertisement

ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ಪರಿಹಾರದ ಬಗ್ಗೆ ಸಮಿತಿಗಳಿರುತ್ತವೆ. ಆ ಪ್ರಕಾರ ಪರಿಹಾರ ಮಂಜೂರಾಗುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ಇಂತಹ ಅನೇಕ ಸಂದರ್ಭಗಳು ಬಂದಿವೆ. ಎಲ್ಲ ಸಂದರ್ಭ ನೋಡಿದರೆ ಅತಿ ಹೆಚ್ಚು ಪರಿಹಾರ ಧನ ಕೊಟ್ಟಿದ್ದು ಮೋದಿ ಸರ್ಕಾರ. ತುಮಕೂರಲ್ಲಿ ಯಡಿಯೂರಪ್ಪ ಮೋದಿ ಮುಂದೆ ಪ್ರವಾಹ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಆ ವಿಚಾರವನ್ನು ಟ್ವಿಸ್ಟ್‌ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next