Advertisement

ಸಿದ್ದು ಮಾತಿಗೆ ತಾಳ ತಂತಿನೇ ಇರಲ್ಲ: ಶೆಟ್ಟರ್‌

11:21 PM Nov 08, 2019 | Lakshmi GovindaRaju |

ಧಾರವಾಡ: ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಸರ್ಕಾರ ಟೀಕಿಸಲು ಯಾವ ವಿಷಯವೂ ಇಲ್ಲದ್ದರಿಂದ ಕಾಂಗ್ರೆಸ್‌ ಆಡಿಯೋ-ವಿಡಿಯೋ ರಾಜಕಾರಣ ಮಾಡುತ್ತಿದೆ ಎಂದು ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಆರೋಪಿಸಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಆಡಿಯೋ ವಿಷಯ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಈಗಾಗಲೇ ನ್ಯಾಯಾಲಯ ತನ್ನ ನಿಲುವು ಸ್ಪಷ್ಟಪಡಿಸಿದೆ.

Advertisement

ಆದರೂ ಈಗ ಇದನ್ನು ರಾಷ್ಟ್ರಪತಿ ಅಂಗಳಕ್ಕೆ ತೆಗೆದುಕೊಂಡು ಹೋಗಿರುವುದು ನಾಚಿಕೆಗೇಡು. ಬಿಜೆಪಿಯವರೇ ಆಡಿಯೋ ಬಿಡುಗಡೆ ಮಾಡಿದ್ದಾರೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅವರು ಹಿಂದೆ-ಮುಂದೆ, ತಾಳ-ತಂತಿ ಏನೂ ಗೊತ್ತಿಲ್ಲ ಎಂಬಂತೆ ಮಾತನಾಡುತ್ತಾರೆ. ಯಾರ ಹೆಸರು ಹೇಳಿದರೂ, ಅದಕ್ಕೆ ದಾಖಲೆ ನೀಡಬೇಕು ಎಂದರು. ಇಂಥವರೇ ಆಡಿಯೋ ಬಿಡುಗಡೆ ಮಾಡಿದ್ದಾರೆಂದು ಆರೋಪಿಸುವ ಕಾಂಗ್ರೆಸ್‌ನವರ ಬಳಿ ಆಡಿಯೋ ಹೇಗೆ ಬಂತು ಎಂಬುದೇ ಗೊತ್ತಿಲ್ಲ.

ಏನೂ ಇಲ್ಲದೇ ದೇಶವ್ಯಾಪಿ ಸುದ್ದಿ ಮಾಡಲೆತ್ನಿಸುತ್ತಿದ್ದಾರೆ. ಇಂಥ ಕೆಲಸಗಳಿಂದಾಗಿಯೇ ಕಾಂಗ್ರೆಸ್‌ ಅಧೋಗತಿಗೆ ಇಳಿದಿದೆ. ರಾಜ್ಯದ ಜನರಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಾಡಿದ ಅನ್ಯಾಯವನ್ನು ಬಿಜೆಪಿ ಮಾಡುತ್ತಿಲ್ಲ. ಮೈತ್ರಿ ಸರ್ಕಾರ ಹಾಸನ, ಹೊಳೆನರಸಿಪುರಕ್ಕೆ ಹಣದ ಹೊಳೆ ಹರಿಸಿದೆ. ನಮ್ಮ ಸರ್ಕಾರ ವರದಿ ಆಧಾರದನ್ವಯ ಅನುದಾನ ನೀಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next