Advertisement

ಬಜೆಟ್ ಗೂ ಮೊದಲೇ ಸದನದಲ್ಲಿ ಫೈಟ್: ಸಿದ್ದರಾಮಯ್ಯ ಕಿವಿಗೆ ‘ಹೂ’ ಇಟ್ಟಿದ್ದೆ ಸಮಸ್ಯೆ

10:31 AM Feb 17, 2023 | Team Udayavani |

ಬೆಂಗಳೂರು: ಈ ಸರ್ಕಾರದ ಅವಧಿಯ ಕೊನೆಯ ಬಜೆಟ್ ಮಂಡನೆ ಆರಂಭಕ್ಕೂ ಮೊದಲೇ ಸದನದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಗದ್ದಲ ಏರ್ಪಟ್ಟ ಪ್ರಸಂಗ ನಡೆಯಿತು.

Advertisement

ತನ್ನ ಎರಡನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಓದಲು ಆರಂಭಿಸುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿವಿಗೆ ಇರಿಸಿದ ಹೂವಿನ ಪ್ರಸ್ತಾಪವಾಯಿತು.

ಸಿದ್ದರಾಮಯ್ಯ ಅವರು ಕೇಸರಿ ಬಣ್ಣದ ಹೂವನ್ನು ಕಿವಿಮೇಲೆ ಇರಿಸಿಕೊಂಡಿದ್ದು ಸದನದ ಗಮನ ಸೆಳೆಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, “ಇಷ್ಟು ದಿನ ಜನರ ಕಿವಿಗೆ ಇವರು ಹೂ ಇಟ್ಟಿದ್ದರು, ಈಗ ಜನರೇ ಅವರ ಕಿವಿಗೆ ಹೂ ಇಟ್ಟಿದ್ದಾರೆ, ಮುಂದೆಯೂ ಹಾಗೆ ಮಾಡುತ್ತಾರೆ’ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ಧರ್ಮಸ್ಥಳ ಪಾದಯಾತ್ರಿಗಳಿಗೆ ಶೌರ್ಯ ವಿಪತ್ತು ತಂಡದಿಂದ ಸ್ವಚ್ಛತಾ ಪಾಠ

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಸರ್ಕಾರ ಕರ್ನಾಟಕದ ಏಳು ಕೋಟಿ ಜನರ ಕಿವಿ ಮೇಲೆ ಹೂ ಇಡುತ್ತಿದೆ ಎಂದರು.

Advertisement

ಈ ವೇಳೆ ಸದಸ್ಯರ ನಡುವೆ ಗದ್ದಲ ಆರಂಭವಾಗಿದ್ದು, ಬಜೆಟ್ ನಡುವೆ ಹೀಗೆಲ್ಲಾ ಹೇಳಬಹದೆ ಎಂದು ವಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಅವರು ಹೂ ಇಟ್ಟರೆ ನಮಗೆ ಸಮಸ್ಯೆಯಿಲ್ಲ’ ಎಂದು ಸಿಎಂ ಹೇಳಿದರೆ, ‘ಅವರು ಕೇಸರಿ ಹೂ ಇಟ್ಟಿದ್ದಕ್ಕೆ ನೀವು ಸಂತೋಷ ಪಡಬೇಕು’ ಎಂದು ಸ್ಪೀಕರ್ ಹೇಳಿದರು. ನಂತರ ಬಜೆಟ್ ಮಂಡನೆ ಆರಂಭವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next