Advertisement

ಸಿದ್ದರಾಮಯ್ಯ ಒಬ್ಬ ಪರದೇಶಿ ಗಿರಾಕಿ: ಏಕವಚನದಲ್ಲೇ ವ್ಯಂಗ್ಯವಾಡಿದ ಶ್ರೀರಾಮುಲು

04:40 PM Nov 04, 2022 | Team Udayavani |

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಕ್ಷೇತ್ರ ಸಿಗದೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರೊಬ್ಬ ಪರದೇಶಿ ಗಿರಾಕಿ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಸಿದ್ದರಾಮಯ್ಯ ವಿರುದ್ದ ಗುಡುಗಿದ್ದಾರೆ.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರು ಚಾಮುಂಡಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಬದಾಮಿಗೆ ಬಂದಿದ್ದೀರಿ. ಈಗ ಬದಾಮಿಯಲ್ಲೂ ನೆಲೆ ಇಲ್ಲದ ನೀನು ಕ್ಷೇತ್ರ ಹುಡುಕುತ್ತಿದ್ದೀಯಾ. ಒಬ್ಬ ಸಿಎಂ ಆಗಿದ್ದ ವ್ಯಕ್ತಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಜನರು ಹೀನಾಯವಾಗಿ ಸೋಲಿಸಿದರು. ಸಿದ್ದರಾಮಯ್ಯ ಪರದೇಶಿ ಗಿರಾಕಿ ತರ. ಕ್ಷೇತ್ರ ಹುಡುಕಿಕೊಂಡು ಹೋಗುತ್ತಿದ್ದಾರೆ. ನಿಮ್ಮ ಕ್ಷೇತ್ರ ಯಾವುದು ಎಂದು ಮೊದಲು ನೀನು ಹೇಳು, ಆ ಮೇಲೆ ನನ್ನ ಬಗ್ಗೆ ಮಾತನಾಡು ಎಂದು ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.

ನಾನೆಲ್ಲೂ ಮೊಳಕಾಲ್ಮೂರು ಕ್ಷೇತ್ರ ಬಿಡುತ್ತೇನೆ ಎಂದು ಹೇಳಿಲ್ಲ. ನೀನಾಗಲೇ ಬಾದಾಮಿ ಬಿಡುವುದಾಗಿ ಹೇಳ್ತಿದ್ದಿಯ. ಬಿಜೆಪಿಗೆ ಅನೇಕ ಮುಖಂಡರು ಬರುತ್ತಿದ್ದಾರೆ. ಶಶಿಕುಮಾರ್, ಮುದ್ದಹನುಮೇಗೌಡ ಬಂದಿದ್ದಾರೆ. ಇನ್ನೂ ಅನೇಕ ಘಟಾನುಘಟಿಗಳು ಬರುತ್ತಾರೆ. ಸಮಯ ಬಂದಾಗ ಅವರ ಹೆಸರು ಹೇಳುತ್ತೇವೆ. ಕಾಂಗ್ರೆಸ್ ನಿಂದ ದೇಶಕ್ಕೆ, ರಾಜ್ಯಕ್ಕೆ ಭವಿಷ್ಯವಿಲ್ಲ. ಕಾಂಗ್ರೆಸ್ ನಲ್ಲಿ ಎಲ್ಲ ಬೈಟೂ ಇದೆ. 14 ಜಿಲ್ಲೆ ಸಿದ್ದರಾಮಯ್ಯ, 14 ಜಿಲ್ಲೆ ಡಿಕೆಶಿ. ಈ ಬೈಟು ಗಿರಾಕಿಗಳು ಮುಂದೆ ಬೈ ಫೋರ್ ಆಗುತ್ತವೆ ಎಂದು ಕೆಣಕಿದರು.

ಇದನ್ನೂ ಓದಿ:ಗುಜರಾತ್ CM ಅಭ್ಯರ್ಥಿ ಇಸುದನ್ …150 ಕೋಟಿ ರೂ. ಹಗರಣ ಬಯಲಿಗೆಳೆದಿದ್ದ ಮಾಜಿ ಪತ್ರಕರ್ತ

ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಸಿಎಂ ಖುರ್ಚಿ ಮ್ಯೂಸಿಕಲ್ ಚೇರ್ ಅಲ್ಲ. 2023 ರ ಚುನಾವಣೆಯಲ್ಲಿಯೂ ಪೂರ್ಣ ಪ್ರಮಾಣ ನಮ್ಮದೆ ಸರ್ಕಾರ ಬರುತ್ತದೆ. 150 ಸ್ಥಾನಕ್ಕೆ ಜನರು ಆಶೀರ್ವಾದ ಮಾಡುತ್ತಾರೆ ಎಂದರು.

Advertisement

ನನ್ನನ್ನು ಆರ್ ಎಸ್ಎಸ್ ಗಿರಾಕಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ನೀನು ಯಾವ ಗಿರಾಕಿ? ನಿನ್ನನ್ನು ಯಾವ ಗಿರಾಕಿ ಎನ್ನಬೇಕು? ಅವರ ತರಹ ನಾಲ್ಕು ನಾಲ್ಕು ಪಕ್ಷಕ್ಕೆ ಹೋಗಿಲ್ಲ. ಕಾಂಗ್ರೆಸ್ ಬಿಟ್ಟು ಅನೇಕರು ಹೋಗುತ್ತಿರುವುದರಿಮದ ವಾಪಾಸ್ ಬರ್ರಿ ಅಂತ ಅವರು ಪಕ್ಷ ಬಿಟ್ಟು ಹೋದವರನ್ನು ಕರೆಯುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ನಾನು ಸ್ಪರ್ಧೆ ಮಾಡುವ ಕುರಿತಂತೆ ನಮ್ಮ‌ ಪಕ್ಷ ನಿರ್ಧಾರ ಮಾಡುತ್ತದೆ ಎಂದರು.

ಜನಾರ್ಧನ ರೆಡ್ಡಿಯವರೊಂದಿಗೆ ನಾನು ಗೌಪ್ಯ ಸಭೆ ಮಾಡಿಲ್ಲ. ಅವರು ಏನು ಹೇಳಿದ್ದಾರೆ ಎಂದು ನಾನು ಪಕ್ಷದ ಮುಖಂಡರಿಗೆ ಹೇಳಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next