Advertisement

ನೆರೆ ಹಾನಿ: ಮರು ಸಮೀಕ್ಷೆಗೆ ಸಿದ್ದು ಒತ್ತಾಯ

11:49 AM Nov 10, 2020 | Suhan S |

ಬೆಂಗಳೂರು: ರಾಜ್ಯ ಸರ್ಕಾರವು ಕೇಂದ್ರದ ಮುಂದೆ ಬೇಡಿಕೆ ಇಟ್ಟಿರುವ ಪ್ರವಾಹ ನಷ್ಟ ಪರಿಹಾರ ಪ್ರಮಾಣ ತುಂಬಾ ಕಡಿಮೆ ಇದ್ದು, ಈ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸಿ ವೈಜ್ಞಾ ನಿಕವಾಗಿ ನಷ್ಟದ ಅಂದಾಜು ಮಾಡಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Advertisement

ಮಳೆ ಮತ್ತು ಪ್ರವಾಹದಿಂದ ಸಾಕಷ್ಟು ನಷ್ಟ ಉಂಟಾಗಿದ್ದರೂ, ಕೇಂದ್ರದಿಂದ ಕಡಿಮೆ ಪರಿಹಾರ ಕೇಳುವ ಮೂಲಕ ಬಿಜೆಪಿ ಸರ್ಕಾರರಾಜ್ಯಕ್ಕೆ ದ್ರೋಹ ಬಗೆದಿದೆ. ವಾಸ್ತವವಾಗಿಉಂಟಾಗಿರುವ ಹಾನಿಗೆ ಹೋಲಿಸಿದರೆ,ಕೇಂದ್ರಕ್ಕೆ ಕೇಳಿರುವ ಪರಿಹಾರ ಮೊತ್ತ ತುಂಬಾ ಕಡಿಮೆ ಇದೆ.ಆದ್ದರಿಂದ ಸರ್ಕಾರ ತಕ್ಷಣ ಮರು ಸಮೀಕ್ಷೆಗೆ ಆದೇಶಿಸಿ, ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ವರ್ಷ ಅತಿ ವೃಷ್ಟಿಯಿಂದ 9.94 ಲಕ್ಷ ಹೆಕ್ಟೇರ್‌ ಬೆಳೆ ನಾಶ ಸೇರಿದಂತೆ ಒಟ್ಟಾರೆ 25,518 ಕೋಟಿ ರೂ. ಪರಿಹಾರ ಕೇಳಲಾಗಿತ್ತು. ಈ ಬಾರಿ 20.86 ಲಕ್ಷ ಹೆಕ್ಟೇರ್‌ ಬೆಳೆ ನಾಶ ಸೇರಿಒಟ್ಟಾರೆ ನಷ್ಟಕ್ಕೆಕೇವಲ 24,941.73ಕೋಟಿ ಪರಿಹಾರ ಕೇಳಿದೆ. ಇದು ರಾಜ್ಯಕ್ಕೆ ಮಾಡಿದ ಅನ್ಯಾಯ ಅಲ್ಲವೇ ಎಂದು ಕೇಳಿದ ಸಿದ್ದರಾಮಯ್ಯ, ಪ್ರವಾಹ ಬಂದು ಮೂರು ತಿಂಗಳಾಗುತ್ತಾ ಬಂದರೂ ಇದುವರೆಗೆ 51,812 ಸಂತ್ರಸ್ತರಿಗೆ ನೀಡಿರುವ ಪರಿಹಾರ ಕೇವಲ 36.57 ಕೋಟಿ ರೂ. ಎರಡನೇ ಹಂತದಲ್ಲಿ 85,996 ಸಂತ್ರಸ್ತ 70.70 ಕೋಟಿ ಪರಿಹಾರ ಇನ್ನೂ ನೀಡಬೇಕಿದೆ. ಉಳಿದವರ ಗತಿ ಏನು ಎಂದು ಟ್ವೀಟ್‌ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇನ್ನು ಕಳೆದ ವರ್ಷ 25,518 ಕೋಟಿ ಪರಿಹಾರ ಕೇಳಿದರೂ, ಕೇಂದ್ರ ಸರ್ಕಾರ ನೀಡಿದ್ದು ಕೇವಲ 1,652 ಕೋಟಿ ರೂ. ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹಾಕ ಬೇಕು. ಆಗ ಮಾತ್ರ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next