Advertisement

ಕಾರು ಹತ್ತುವ ವೇಳೆ ಆಯ ತಪ್ಪಿ ಕುಸಿದು ಬಿದ್ದ ಸಿದ್ದರಾಮಯ್ಯ; ಆತಂಕ ಬೇಡ-ಸಿದ್ದು ಟ್ವೀಟ್

01:19 PM Apr 29, 2023 | Team Udayavani |

ಹೊಸಪೇಟೆ: ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ಹೆಲಿಪ್ಯಾಡ್‌ ನಲ್ಲಿ ನೆರೆದಿದ್ದ ಜನರತ್ತ ಕೈಬೀಸುತ್ತಿರುವಾಗಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕುಸಿದು ಬೀಳುತ್ತಿರುವುದನ್ನು ಗಮನಿಸಿದ ಅಂಗರಕ್ಷಕ ಅವರ ನೆರವಿಗೆ ಧಾವಿಸಿರುವ ಘಟನೆ ವಿಜಯನಗರದ ಕೂಡ್ಲಿಗಿಯಲ್ಲಿ ಶುಕ್ರವಾರ (ಎ.29) ನಡೆದಿದೆ.‌

Advertisement

ಇದನ್ನೂ ಓದಿ:Desi Swara; ಅಮೆರಿಕದಲ್ಲಿ ಸೀತಾ ಕಲ್ಯಾಣ; ಹೊರದೇಶದಲ್ಲಿ ಅರಳುತ್ತಿದೆ ಸನಾತನ ಸಂಸ್ಕೃತಿ

ಸಿದ್ದರಾಮಯ್ಯನವರು ನಿಗದಿತ ಕಾರ್ಯಕ್ರಮದ ಅಂಗವಾಗಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಡಾ. ಎನ್.ಟಿ.ಶ್ರೀನಿವಾಸ್‌ ಅವರ ಪರ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

ಹೆಲಿಪ್ಯಾಡ್‌ ಸುತ್ತ ನೆರದಿದ್ದ ಜನಸ್ತೋಮದತ್ತ ಸಿದ್ದರಾಮಯ್ಯನವರು ಕೈಬೀಸಿದ್ದ ನಂತರ ಕಾರಿನೊಳಗೆ ಕುಳಿತುಕೊಳ್ಳಲು ಸಂದರ್ಭದಲ್ಲಿ ಆಯ ತಪ್ಪಿ ಕುಸಿದು ಬೀಳುತ್ತಿದ್ದ ಸಿದ್ದರಾಮಯ್ಯನವರನ್ನು ಅಂಗರಕ್ಷಕ ತಡೆದು ಕಾರಿನೊಳಗೆ ಕುಳ್ಳಿರಿಸಿದ್ದರು.

ತಕ್ಷಣವೇ ಸಿದ್ದರಾಮಯ್ಯನವರ ಆಪ್ತರೊಬ್ಬರು ಮಜ್ಜಿಗೆ ನೀರನ್ನು ಕೊಟ್ಟು ಉಪಚರಿಸಿದ್ದರು. ನಂತರ ಕಾರಿನಲ್ಲಿ ಕಾರ್ಯಕ್ರಮದ ವೇದಿಕೆಯತ್ತ ತೆರಳಿರುವುದಾಗಿ ವರದಿ ತಿಳಿಸಿದೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯನವರು, ಗಾಬರಿಪಡುವಂತಹದ್ದೇನಿಲ್ಲ. ಗಟ್ಟಿಮುಟ್ಟಾಗಿದ್ದೇನೆ. ಕಾರಿನಲ್ಲಿ ಸೈಡ್‌ ಸ್ಟೆಪ್‌ ಇಲ್ಲದ ಕಾರಣ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೇನೆ. ಈಗ ಆರಾಮವಾಗಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next