Advertisement

ಈಶ್ವರಪ್ಪ ಪೆದ್ದ, ನಳಿನ್‌ ಭಯೋತ್ಪಾದಕ: ಸಿದ್ದು

12:09 AM Nov 29, 2021 | Team Udayavani |

ಚಿತ್ರದುರ್ಗ: ನಮ್ಮ ಪಕ್ಷದ ಅಭ್ಯರ್ಥಿಯನ್ನು ಹೈಕಮಾಂಡ್‌ ಆಯ್ಕೆ ಮಾಡಿದೆ. ಇದನ್ನು ಪ್ರಶ್ನಿಸಲು ಈಶ್ವರಪ್ಪ ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ವಿಧಾನ ಪರಿಷತ್‌ ಚಿತ್ರದುರ್ಗ ಸ್ಥಳೀಯ ಸಂಸ್ಥೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ. ಸೋಮಶೇಖರ್‌ ಪರ ಮತಯಾಚನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲ ಎಂದಿರುವ ಈಶ್ವರಪ್ಪ ಬಿಜೆಪಿಯ ಒಬ್ಬ ಪೆದ್ದ.

ಜತೆಗೆ ಭಯೋತ್ಪಾದನೆಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲು ಅವರು ಒಬ್ಬ ಭಯೋತ್ಪಾದಕ.ಅವರ ಮಾತಿಗೆ ಮೂರು ಕಾಸಿನ ಬೆಲೆಯೂ ಇಲ್ಲ ಎಂದರು.

ಇದನ್ನೂ ಓದಿ:ಮಹಾ ಸರ್ಕಾರಕ್ಕೆ ಹೊಸ ಹೆಸರಿಟ್ಟ ಪ್ರಕಾಶ್‌ ಜಾವಡೇಕರ್‌!

ಜೇಬಲ್ಲಿದೆಯೇ ಮತ?
ವಿಧಾನಸಭೆಯಲ್ಲಿ 140 ಸ್ಥಾನ ಗೆಲ್ಲುತ್ತೇವೆ ಎನ್ನುವ ಯಡಿಯೂರಪ್ಪನ ಜೇಬಿನಲ್ಲಿ ಮತಗಳಿವೆಯೇ? ರಾಜ್ಯದ ಜನತೆ ಬಿಜೆಪಿ ಕಿತ್ತೂಗೆಯಲು ತೀರ್ಮಾನಿಸಿದ್ದಾರೆ.

Advertisement

ವಿಧಾನ ಪರಿಷತ್‌ ಚುನಾವಣೆಯ 25 ಕ್ಷೇತ್ರಗಳ ಪೈಕಿ ಜೆಡಿಎಸ್‌ 6 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದ ಕಡೆ ಯಾರಿಗೆ ಬೆಂಬಲ ನೀಡುತ್ತಿದೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next