Advertisement

ಸಿದ್ದರಾಮಯ್ಯ ಸ್ಟಾಂಡರ್ಡ್‌ ಲೀಡರ್‌: ಜಮೀರ್‌

10:59 PM Aug 23, 2019 | Lakshmi GovindaRaj |

ಬೆಂಗಳೂರು: ದೇವೇಗೌಡರು ರಾಜಕೀಯ ಲಾಭ ಇಲ್ಲದೇ ಏನೂ ಮಾತನಾಡುವುದಿಲ್ಲ. ಸಿದ್ದರಾಮಯ್ಯ ಸ್ಟಾಂಡರ್ಡ್‌ ರಾಜಕಾರಣಿ. ಅವರು ಬೇರೆ ರೀತಿಯ ರಾಜಕಾರಣ ಮಾಡುವುದಿಲ್ಲ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ಕಾರ ನಡೆಸಿರುವುದರಿಂದ ಪತನವಾಯಿತು. ಶಾಸಕರು ಹಾಗೂ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಮೈತ್ರಿ ಸರ್ಕಾರ ಐದು ವರ್ಷ ಇರುತ್ತಿತ್ತು ಎಂದು ಹೇಳಿದರು.

ಐಎಂಎ ಪ್ರಕರಣದಲ್ಲಿ ತಮ್ಮನ್ನು ಜೈಲಿಗೆ ಕಳುಹಿಸಲು ಕುಮಾರಸ್ವಾಮಿ ಸಂಚು ರೂಪಿಸಿದ್ದರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ಜೈಲಿಗೆ ಕಳುಹಿಸಲು ಕುಮಾರಸ್ವಾಮಿ ಯಾರು ? ಅವರನ್ನು ಜೈಲಿಗೆ ಕಳುಹಿಸಲು ನಾನ್ಯಾರು ? ಐಎಂಎ ಪ್ರಕರಣದಲ್ಲಿ ಬಡ ಜನರ ಹಣ ಇದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ನಾನೇ ಹೇಳಿದ್ದೆ. ಸರ್ಕಾರ ಈಗ ಸಿಬಿಐ ತನಿಖೆಗೆ ವಹಿಸಿದೆ. ಅದನ್ನು ಸ್ವಾಗತಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next