Advertisement

ಮನುಷ್ಯತ್ವ ಬೇಕೋ,ಕೋಮುವಾದ ಬೇಕೋ? ನೀವೇ ನಿರ್ಧರಿಸಿ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

05:54 PM Apr 18, 2022 | Team Udayavani |

ಮಂಡ್ಯ: ನಿಮಗೆ ಮನುಷ್ಯತ್ವ ಬೇಕು ಎನ್ನುವುದಾದರೆ, ಎಲ್ಲ ಧರ್ಮ, ಜಾತಿಯರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗಬೇಕು ಎನ್ನುವುದಾದರೆ ಕಾಂಗ್ರೆಸ್ ಆಯ್ಕೆ ಮಾಡಿ… ಸಮಾಜದಲ್ಲಿ ಬೆಂಕಿ ಹಚ್ಚುವ, ದ್ವೇಷ ಬಿತ್ತುವ, ಕೋಮುವಾದ ಬೆಳೆಸಬೇಕು ಎನ್ನುವುದಾದರೆ ಬಿಜೆಪಿ ಆಯ್ಕೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.

Advertisement

ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯವರಿಗೆ ಜೆಡಿಎಸ್‌ನವರು ಬೆಂಬಲವಾಗಿ ನಿಂತಿದ್ದಾರೆ. ಅವರಿಗೂ ಬೆಂಬಲ ನೀಡಬೇಕೆ ಎನ್ನುವುದನ್ನು ಚಿಂತನೆ ಮಾಡಿ ಎಂದು ಹೇಳಿದರು.

ಇದನ್ನೂ ಓದಿ: ಶೇ, 30 ಕಮಿಷನ್ ಆರೋಪ ; ದಿಂಗಾಲೇಶ್ವರ ಶ್ರೀಗಳು ದಾಖಲೆ ಕೊಡಲಿ: ಸಿಎಂ

ನಿಮಗೆ ಕೈಜೋಡಿಸಿ ಕೇಳಿಕೊಳ್ಳುತ್ತೇನೆ ಕಣ್ಣೀರು- ಗಿಣ್ಣೀರನ್ನು ಬಿಟ್ಟುಬಿಡಿ, ರಾಜಯಕೀಯದವರಿಗೆ ಯಾಕೆ ಕಣ್ಣೀರು ಬರುತ್ತದೆ. ರಾಜಕೀಯ ನಮ್ಮಪ್ಪನ ಮನೆಯ ಆಸ್ತಿಯೇ ಅಯ್ಯೋ ಬಿದ್ದೋಯ್ತು ಎಂದು ಅಳುವುದಕ್ಕೆ. ಜನ ಆಶೀರ್ವಾದ ಮಾಡಿದರೆ ಪಕ್ಷ ಆಡಳಿತದಲ್ಲಿರುತ್ತೇವೆ. ಇಲ್ಲವಾದರೆ ವಿರೋಧ ಪಕ್ಷದಲ್ಲಿರುತ್ತೇವೆ. ದಯಮಾಡಿ ಕಣ್ಣೀರಿಗೆ  ಯಾರೂ ಬಲಿಯಾಗಬೇಡಿ ಎಂದು ಹೇಳಿದರು.

ರಾಜ್ಯವನ್ನು ಭ್ರಷ್ಟಾಚಾರ ಮುಕ್ತಮಾಡಲು ನಮ್ಮ ಕಾರ್ಯಕರ್ತರು ಮುಂದಾಗಬೇಕು, ಜನತೆ ಇದಕ್ಕೆ ಸಹಕಾರ ನೀಡಬೇಕು. ಸದನದಲ್ಲಿ ಜನರ ಹಿತಕ್ಕಾಗಿ ನಾವು ಮತ್ತಷ್ಟು ಹೋರಾಟ ಮಾಡಲು ಸಿದ್ಧರಿದ್ದೇವೆ.  ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next