Advertisement

ಮತ್ತೆ ಮತ್ತೆ ಕಾಡುತ್ತಿದೆ ಚಾಮುಂಡೇಶ್ವರಿ ಸೋಲು! ಅಭಿಮಾನಿಗಳ ಮೇಲೆ ಕೋಪಗೊಂಡ ಸಿದ್ದರಾಮಯ್ಯ

04:44 PM Nov 19, 2021 | Team Udayavani |

ಮೈಸೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕಳೆದ ವಿಧಾನಸಭೆ ಚುನಾವಣೆಯ ಸೋಲು ಮತ್ತೆ ಮತ್ತೆ ಕಾಡುತ್ತಿರುವಂತಿದೆ. ಅದಕ್ಕೆ ಕಾರಣ ಅವರು ಇಂದು ಅಭಿಮಾನಿಗಳ ಬಳಿ ನಡೆದುಕೊಂಡ ರೀತಿ.

Advertisement

ಮೈಸೂರಿನ ಟಿಕೆ.ಲೇಔಟ್‌ನಲ್ಲಿರುವ ತಮ್ಮ ನಿವಾಸದ ಮುಂದೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಅವರಿಗೆ ಎಂಎಲ್ ಸಿ ಟಿಕೆಟ್ ನೀಡುವಂತೆ ಮರಿಗೌಡ ಬೆಂಬಲಿಗರು ಸಿದ್ದರಾಮಯ್ಯರನ್ನು ಒತ್ತಾಯ ಮಾಡಿದರು. ಈ ವೇಳೆ ಕೆರಳಿದ ಸಿದ್ದರಾಮಯ್ಯ ಟಿಕೆಟ್ ಕೇಳಿದ ಅಭಿಮಾನಿಗಳಿಗೆ ಮುಖದ ಮಾಸ್ಕ್ ತೆಗೆದು ಬೈದರು.

ಇದನ್ನೂ ಓದಿ:ಹೋರಾಟದಲ್ಲಿ ರೈತರ ಜೀವಹಾನಿ ಆಗಿದ್ದಕ್ಕೆ ಯಾರು ಹೊಣೆ?: ವೀರಪ್ಪ ಮೊಯ್ಲಿ

“ಎಲ್ಲರೂ ನನ್ನನ್ನು ಸೋಲಿಸಿ ಈಗ ಟಿಕೆಟ್ ಕೇಳಲು ಇಲ್ಲಿ ಬಂದಿದ್ದೀರ? ನಾಚಿಕೆ ಆಗುವುದಿಲ್ವ ನಿಮಗೆ” ಎಂದು ಸಿದ್ದರಾಮಯ್ಯ ಬೈದು ಕಳುಹಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನ ಜಿಟಿ ದೇವೇಗೌಡ ವಿರುದ್ಧ ಸೋಲನುಭವಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next