Advertisement

ಸಿದ್ದರಾಮಯ್ಯ ಜೆಡಿಎಸ್ ನ ಶ್ರೀನಿವಾಸ ಗೌಡ ಅವರನ್ನು ಖರೀದಿಸಿದ್ದಾರೆ: ಬಿಜೆಪಿ ಟೀಕೆ

04:56 PM Jan 13, 2023 | Team Udayavani |

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಕ್ಷೇತ್ರ ಇಲ್ಲದಿರುವುದಕ್ಕೆ ಅಲೆಮಾರಿ ಆಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

Advertisement

ಮೊದಲು ವರುಣಾ, ತದನಂತರ ಚಾಮುಂಡೇಶ್ವರಿ, ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಈಗ ಕೋಲಾರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಸೋಲುವ ಭೀತಿಯಿಂದ ಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ ಟೀಕಿಸಿದರು.

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ಮುಂದಾಗಿ ಜೆಡಿ ಎಸ್ ನ ಶ್ರೀ ನಿವಾಸಗೌಡ ಅವರನ್ನು ಖರೀದಿಸಿದ್ದಾರೆ. ಇದಕ್ಕೆ ವೈರಲ್ ಆಗಿರುವ ಆಡಿಯೋ ಸಾಕ್ಷಿ ಯಾಗಿದೆ ಎಂದು ಆರೋಪಿಸಿದರು. ‌

ಬಿಜೆಪಿ ಬೂತ್ ವಿಜಯ ಅಭಿಯಾನ ಮುಂದುವರಿಕೆ
ಕಳೆದ ಜನವರಿ 2ರಿಂದ ಆರಂಭವಾಗಿರುವ ಬಿಜೆಪಿ ಬೂತ್ ಅಭಿಯಾನ 12 ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಈಗ ಇದನ್ನು ಇನ್ನೂ ಮುಂದುವರೆಯಲಿದೆ ಎಂದು ಇದೇ ಸಂದರ್ಭದಲ್ಲಿ ರವಿಕುಮಾರ ಆರೋಪಿಸಿದರು.

ಬೆಂಗಳೂರಿನಲ್ಲಿ ಈ ಹಿಂದೆ ಕಾಮಗಾರಿಯೊಂದರಲ್ಲಿ ಶೇ. 53ರಷ್ಟು ಮೊತ್ತ ಹೆಚ್ಚಳ ಮಾಡಿ ಶೇ. 40 ಫರ್ಸೆಂಟೈಜ್ ಕಮಿಷನ್ ಹೊಡೆದದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ ಎಂದು ದಾಖಲೆ ಬಿಡುಗಡೆ ಮಾಡಿದರು.

Advertisement

ಮೇಯರ- ಉಪಮೇಯರ ಚುನಾವಣೆಯ ಮತದಾರರ ಪಟ್ಟಿ ಹಾಗೂ ಮೀಸಲಾತಿ ಗೊಂದಲಕ್ಕೆ ಹೈಕೋರ್ಟ್ ಪೀಠ ತೆರೆ ಎಳೆದಿದ್ದರಿಂದ ಎರಡ್ಮೂರು ದಿನದೊಳಗೆ ಸಭೆ ಸೇರಿ ಚುನಾವಣೆಗೆ ತಂತ್ರ ಗಾರಿಕೆ ರೂಪಿಸುವುದಾಗಿ ರವಿಕುಮಾರ ಇದೇ ಸಂದರ್ಭದಲ್ಲಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜೀ ಪಾಟೀಲ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next