Advertisement

ವಿಪಕ್ಷ ಸ್ಥಾನದ ಕಳೆದುಕೊಳ್ಳುವ ಭೀತಿಯಲ್ಲಿ ಸರಕಾರವನ್ನು ಟೀಕಿಸುತ್ತಿರುವ ಸಿದ್ಧರಾಮಯ್ಯ

09:57 AM Nov 04, 2019 | Team Udayavani |

ಚಿಕ್ಕಬಳ್ಳಾಪುರ: ವಿಪಕ್ಷ ನಾಯಕ ಸ್ಥಾನ ಎಲ್ಲಿ ಕೈತಪ್ಪಿ ಹೋಗುತ್ತದೆಯೋ ಎಂಬ ಕಾರಣಕ್ಕೆ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೋದಲ್ಲಿ ಬಂದಲ್ಲಿ ಬಿ.ಎಸ್.ವೈ. ನೇತೃತ್ವದ ಸರಕಾರವನ್ನು ಟೀಕಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಸಿದ್ಧರಾಮಯ್ಯ ಅವರ ಮೇಲೆ ಹರಿಹಾಯ್ದಿದ್ದಾರೆ.

Advertisement

ಪರಮೇಶ್ವರ್ ಅಥವಾ ಹೆಚ್ ಕೆ ಪಾಟೀಲ್ ಅವರಿಗೆ ಸಿಗಬೇಕಿದ್ದ ವಿಪಕ್ಣ ಸ್ಥಾನ ಅಚಾನಕ್ಕಾಗಿ ಸಿದ್ದರಾಮಯ್ಯನವರಿಗೆ ಸಿಕ್ಕಿದೆ. ನಾನು ವಿಪಕ್ಷ ನಾಯಕ ಎಂದು ತೋರಿಸಿಕೊಳ್ಳು ಅವರು ಆಧಾರರಹಿತ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಅಶೋಕ್ ಅವರು ಸಿದ್ಧರಾಮಯ್ಯ ಅವರ ನಡೆಯನ್ನು ಟೀಕಿಸಿದ್ದಾರೆ.

ಸಿದ್ಧರಾಮಯ್ಯ ಅವರು ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರೆ ಈ ಹಿಂದೆ ವೀರಪ್ಪ ಮೊಯಿಲಿ ಅವರು ಸುಳ್ಳಿನ ಸರದಾರರಾಗಿದ್ದರು ಈಗ ಸಿದ್ಧರಾಮಯ್ಯ ಅವರು ಮೊಯಿಲಿ ಅವರನ್ನೂ ಮೀರಿಸುವ ಸುಳ್ಳುಗಾರರಾಗಿದ್ದಾರೆ ಎಂದು ಅಶೋಕ್ ಅವರು ಮಾಜೀ ಮುಖ್ಯಮಂತ್ರಿ ಮೇಲೆ ಕಿಡಿಕಾರಿದರು.

ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರು ನಮ್ಮ ಅಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಇದೇ ಸಿದ್ಧರಾಮಯ್ಯನವರು ಹೇಳಿದ್ದರು ಆದರೆ ನಂತರ ಏನಾಯ್ತು ಎಂಬುದನ್ನು ರಾಜ್ಯದ ಜನರೇ ನೋಡಿದ್ದಾರೆ ಎಂದು ಅಶೋಕ್ ಅವರು ಸಿದ್ದು ಕಾಲೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next